There are no advertisements in the Bidar yet
https://avalanches.com/in/bidar__1899942_15_10_2021
https://avalanches.com/in/bidar__1899942_15_10_2021

*ಡಾ. ಗದುಗಿನ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಮೂರನೇ ಪುಣ್ಯಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ*


ಕನ್ನಡನಾಡಿನ ಪರಂಪರೆಯಲ್ಲಿ ನಾವು ಅನೇಕ ಸ್ವಾಮೀಜಿಗಳನ್ನು ಕಂಡಿದ್ದೇವೆ ಅವರಲ್ಲಿ ಪ್ರಮುಖರು ಡಾ. ತೋಂಟದ ಸಿದ್ಧಲಿಂಗ ಮಹಾ ಸ್ವಾಮಿಗಳು. ಅವರ ವ್ಯಕ್ತಿತ್ವ ನಡೆ-ನುಡಿ ಬದುಕಿನ ದಾರಿ ವಿಶಿಷ್ಟವಾದದ್ದು. ಅವರ ವಿಚಾರಧಾರೆಗಳು ಜನಸಾಮಾನ್ಯರಿಗೆ ತುಂಬಾ ಹತ್ತಿರವಾದವು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರನ್ನೂ ತನ್ನ ವ್ಯಕ್ತಿತ್ವ ನಡೆ-ನುಡಿ ಗಾಂಭೀರ್ಯದಿಂದ ಸ್ಪಷ್ಟವಾದ ನಿಲುವಿನಿಂದ ಆಕರ್ಷಿಸುವ ನಿಜ ಜಂಗಮ ಕನ್ನಡ ಜಗದ್ಗುರು.

ಇವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿರೇಮಠದ ಮರಯ್ಯ ಮತ್ತು ಶಂಕರವ್ವರ ಉದರದಲ್ಲಿ 21-2-1949 ರಂದು ಜನಿಸಿದರು. ಇವರ ಮೂಲ ಹೆಸರು ಸಿದ್ಧರಾಮ. ಸಿಂದಗಿ ತಾಲೂಕಿನ ಪ್ರಾಥಮಿಕ ಶಾಲೆಯಲ್ಲಿ ಏಳನೆಯ ತರಗತಿಯವರೆಗೆ ಓದಿದ್ದರು. ಆಗಲೇ ಪಟ್ಟಾಧ್ಯಕ್ಷರು ಮುಂದಿನ ಉತ್ತರಾಧಿಕಾರಿ ಯನ್ನಾಗಿ ಘೋಷಿಸಿದರು. 1966 ರಲ್ಲಿ 10ನೆಯ ತರಗತಿಯನ್ನು ಪೂರೈಸಿದ ಮೇಲೆ ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪ್ರವೇಶ ಪಡೆದು ಸಂಸ್ಕೃತ ವನ್ನು ಅಧ್ಯಯನ ಮಾಡಿ 1972 ರಲ್ಲಿ ಬಿ.ಎ. ಪಾಸದರು. ಜನಪದ ವಿಷಯದಲ್ಲಿ ಎಂ.ಎ. ಕನ್ನಡ ಪದವಿ ಪಡೆದರು. ಮುಂದೆ ಪಟ್ಟಾಧ್ಯಕ್ಷರಾಗಿ ಸಿಂದಗಿಯ ಸಿದ್ಧರಾಮ ಗದುಗಿನ ಸಿದ್ಧರಾಮರಾದರು.

ಗದಗ ತೋಂಟದ ಮಠದ 19ನೆಯ ಪೀಠಾಧಿಪತಿಗಳಾಗಿ ಬಂದರು.

ವಿದ್ಯಾರ್ಥಿಗಳಾಗಿದ್ದಾಗಲೆ ನಾಯಕತ್ವದ ಗುಣ ಹೊಂದಿದ್ದ ಅವರು ಭಾಷಣವಾಗ್ಮಿ ಗಳಾಗಿದ್ದರು.

29-07-1974 ರಲ್ಲಿ ಗದುಗಿನ ತೋಂಟದಾರ್ಯ ಮಠದ ಜಗದ್ಗುರುಗಳಾಗಿ ಬಂದರು. ತಮ್ಮ ಮೊದಲನೆಯ ದಿನವೇ ಪೀಠವೇರಿ ಅಡ್ಡಪಲ್ಲಕ್ಕಿ ಉತ್ಸವ ತಡೆದರು. ಹನ್ನೆರಡನೇ ಶತಮಾನದ ಬಸವಣ್ಣ ಅಲ್ಲಮ ಪ್ರಭುಗಳ ವ್ಯಕ್ತಿತ್ವ ಹಾಗೂ ಶರಣರೆಲ್ಲಾ ಪ್ರಭಾವಕ್ಕೆ ಒಳಗಾದ ಇವರು ಶರಣತತ್ವದ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದರು.

*ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳು*

ಅಡ್ಡಪಲ್ಲಕ್ಕಿ ಮನುಷ್ಯ ಮನುಷ್ಯರ ಮೇಲೆ ಕುಳಿತು ಕೊಳ್ಳುವುದು ಅಪರಾಧ , ಜಾತ್ರೆಯ ರಥದ ಗಾಲಿಗೆ ಅನ್ನವಿಡುವ ಪದ್ಧತಿಯನ್ನು ನಿಲ್ಲಿಸಿ ಅನ್ನದ ಮಹತ್ವವನ್ನು ತಿಳಿಸಿದರು. ಗದಗದಿಂದ ಡಂಬಳಕ್ಕೆ ಪಾದಯಾತ್ರೆ ಮಾಡಿ ಜನರ ಭಕ್ತರ ಮನಸ್ಸಿಗೆ ನಾಟಿದರು. ಹಾಳು ಬಿದ್ದ ಭೂಮಿಯಲ್ಲಿ ಕೃಷಿ ಕಾರ್ಯ ಮಾಡಿದರು. ಹೀಗೆ ಮಾಡಿ ಕೃಷಿಯ ಮಹತ್ವವನ್ನು ಎಲ್ಲರಿಗೂ ತಿಳಿಸಿ ತಾವೇ ಸ್ವತಃ ಜಮೀನು ಮಾಡಿದರು.

ಧರ್ಮ ಸಮಾಜ ಸಾಹಿತ್ಯ ಕೃಷಿ ಶಿಕ್ಷಣದ ಮೂಲಕ ಮಾನವೀಯ ಮೌಲ್ಯದ ಮಠವಾಗಿಸಿದರು.

ದೀನ ದಲಿತರ ಹಿಂದುಳಿದ ವರ್ಗದ, ಮಹಿಳೆಯರ ಹಾಗೂ ಶೋಷಿತರ ಸಮುದಾಯಗಳಿಗೆ ಜ್ಞಾನಾರ್ಜನೆಯನ್ನು ನೀಡಿ ಅವರಿಗೆ ಒಳ್ಳೆಯ ಹುದ್ದೆಗಳಿಗೆ ಹೋಗುವಂತೆ ಪ್ರೋತ್ಸಾಹಿಸಿದರು. ತನ್ನ ಕೈಯಿಂದ ಆದ ಸಹಾಯ ಸಹಕಾರವನ್ನು ಒದಗಿಸಿದರು. ಮಠಗಳು ಜೀವಂತವಾಗಿರಬೇಕು ಎಂಬ ಆಶಯ ಹೊಂದಿದ್ದರು. ದಲಿತೋದ್ಧಾರ ಬಸವ ಸಂಸ್ಕೃತಿಯನ್ನು ಪಾಲಿಸಿದ ಪೂಜ್ಯರು ಅಂತರ್ಜಾತಿ ವಿವಾಹ ದೇವದಾಸಿಯರ ವಿವಾಹ ಕಲ್ಯಾಣ ಮಂಟಪವನ್ನು ಉದ್ಘಾಟನೆ ಮಾಡುವಾಗ 65 ಕೋಮಿನ ಸಾಮೂಹಿಕ ಉಚಿತ 225 ವಿವಾಹ ಮಾಡಿದ್ದು ದಾಖಲಾರ್ಹ. ಸಿದ್ದರಾಮ ಜಯಂತಿಗೆ ವಡ್ಡರ ಓಣಿಯಲ್ಲಿ ಅನ್ನದಾಸೋಹ ಮಾಡಿದ್ದರು ರಾಯಚೂರು ಜಿಲ್ಲೆಯ ಮಾಲಗಿತ್ತಿಯಲ್ಲಿ ಸಾಮೂಹಿಕ ವಿವಾಹ ಮಾಡಿ ಅದರ ಖರ್ಚನ್ನೂ ನಿಭಾಯಿಸಿದರು. ಕಿಲಾರಿ ಭೂಕಂಪಕ್ಕೆ ಅಲ್ಲಿನ ಜನರಿಗೆ ಆಶ್ರಯ ನೀಡಿದರು. ಏಡ್ಸ್ ರೋಗದ ಹಾಗೂ ಇತರ ಜನಸಾಮಾನ್ಯರಿಗೆ ಉಚಿತ ಶಿಬಿರಗಳನ್ನು ಏರ್ಪಡಿಸಿ ಚಿಕಿತ್ಸೆ ನೀಡಿದ್ದಾರೆ. ಹೀಗೆ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಾ ಜನಸಾಮಾನ್ಯರ ನೋವು-ನಲಿವುಗಳಿಗೆ ಸ್ಪಂದಿಸಿದ್ದಾರೆ. ಲಿಂಗಾಯತ ಧರ್ಮ ಪ್ರತ್ಯೇಕತೆಗಾಗಿ ಹೋರಾಟ ಮಾಡಿದರು. ಕನ್ನಡ ಶಾಸ್ತ್ರೀಯ ಭಾಷೆಗಾಗಿ ವಿಶೇಷ ಸ್ಥಾನವನ್ನು ಸಿಗಬೇಕೆಂದು ಪಾದಯಾತ್ರೆ ಮಾಡಿ ಜಾಗೃತಿಗೊಳಿಸಿದರು ಜಾತಿ ಮತ ಧರ್ಮ ವೈಷಮ್ಯಗಳು ಬಂದಾಗ ತಾವೇ ಸ್ವಂತ ಹೋಗಿ ಬಗೆಹರಿಸಿದರು. ಕುಪ್ಪತಗುಡ್ಡದಲ್ಲಿ (ಔಷಧಿಗಳ ಕೇಂದ್ರ) ಬೆಂಕಿ ತಗುಲಿದಾಗ ಗಣಿಧಣಿಗಳು ಭೂಮಿ ಅಗೆಯಲು ಆರಂಭಿಸಿದಾಗ ಪಣತೊಟ್ಟು ವಿರೋಧಿಸಿದರು. ಪರಿಸರ, ರೈತ, ಪೋಸ್ಕೊ, ಮಹದಾಯಿ, ಸಿಂಗಟಾಲೂರು ನೀರಾವರಿ ಹೀಗೆ ಅನೇಕ ಹೋರಾಟಗಳ ಮುಂದಾಳತ್ವ ವಹಿಸಿದ್ದರು.


ಶಿಕ್ಷಣದಿಂದಲೇ ಜನರ ಉದ್ಧಾರ ಎಂದು ತಿಳಿದು 1976 ರಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸ್ಥಾಪಿಸಿದರು. ಎಲ್.ಕೆ.ಜಿ.ಯಿಂದ ಹಿಡಿದು ಉನ್ನತ ಮಟ್ಟದ ಶಿಕ್ಷಣದ ವರೆಗೂ ತಾಂತ್ರಿಕ ಐ.ಟಿ.ಐ ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಸಂಗೀತ , ಚಿತ್ರಕಲೆ, ಸಂಸ್ಕೃತ ಪಾಠಶಾಲೆಗಳು ಸೇರಿದಂತೆ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ , ಹಲವು ಶಿಕ್ಷಣ ಸಂಸ್ಥೆಗಳಿಗೆ ಉಚಿತ ಭೂಮಿಯನ್ನು ನೀಡಿದ್ದಾರೆ. ಗದಗ ಮಾತ್ರವಲ್ಲದೆ ಕರ್ನಾಟಕದ ಅನೇಕ ಭಾಗಗಳಲ್ಲಿ ಶಿಕ್ಷಣ ಕೇಂದ್ರ ತೆರೆದು ಶಿಕ್ಷಣ ದಾಸೋಹ ಮಾಡಿದ್ದಾರೆ.

ಲಿಂಗಾಯತ ಪ್ರಗತಿಶೀಲ ಯುವ ಕೇಂದ್ರ 1972ರಲ್ಲಿ ಸ್ಥಾಪಿಸಿದರು. ಅನೇಕರಿಗೆ ಶಿವಾನುಭವ ಪ್ರವಚನ ವಚನ ಚಿಂತನೆ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ಹಮ್ಮಿಕೊಂಡಿದ್ದಾರೆ. ಬಂಡಾಯ ಸಾಹಿತ್ಯ ಸಂಘಟನೆ ಕಾರ್ಯಗಾರವನ್ನು ಸ್ಥಾಪಿಸಿದ್ದರು.

*ಪ್ರಶಸ್ತಿ ಗೌರವಗಳು* :

ಕೇಂದ್ರ ಸರ್ಕಾರದ ಪ್ರತಿಷ್ಠಿತ ಕೋಮು ಸೌಹಾರ್ದತಾ ಪ್ರಶಸ್ತಿ 2001 ರಲ್ಲಿ, 1994 ರಲ್ಲಿ ಕಲಬುರಗಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕ ಸೊಗಸು ಪ್ರಶಸ್ತಿ , ಕನ್ನಡ ಪುಸ್ತಕ ಪ್ರಾಧಿಕಾರ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವಗಳು ದೊರೆತಿವೆ. ಅಮೆರಿಕದ ಲೀಸಾ ವೇಲ್ ಅವರು ಮೂರು ವರ್ಷ ಮಠ ದಲ್ಲಿದ್ದು ಮಠ ಗುರುಗಳ ಮತ್ತು ಸಮಾಜದ ಬಗ್ಗೆ ಸುಂದರವಾಗಿ ವರ್ಣಿಸಿದ್ದಾರೆ. ಬಸವಧರ್ಮ ವೃಕ್ಷದ ತಾಯಿಬೇರಾದ ಕಾಯಕ-ದಾಸೋಹದಲ್ಲಿ ಅಚಲ ಶ್ರದ್ಧೆಯನ್ನಿರಿಸಿದ ಶ್ರೀಗಳು ಸ್ವತಃ ಗುದ್ದಲಿ ಹಿಡಿದು ಡಂಬಳದಲ್ಲಿ ಕೈಯಾರೆ ಬಾವಿತೋಡಿ, ಉತ್ತಿ-ಬಿತ್ತಿ ಕೃಷಿಕರಾಗಿ ದುಡಿದರು. ಕೃಷಿಗೆ ಪ್ರಗತಿಪರ ವೈಜ್ಞಾನಿಕ ತಳಹದಿಯನ್ನು ಒದಗಿಸಿ ಅವರಿಗೆ ಮಾರ್ಗದರ್ಶಕರಾದರು. ದಾಸೋಹ ತತ್ವದಲ್ಲಿ ಅಪಾರ ನಂಬಿಕೆ ಇರುವ ಶ್ರೀಗಳು ಎಡೆಯೂರು ಕ್ಷೇತ್ರ, ಕಗ್ಗೆರೆ, ಡಂಬಳ, ಗದಗ, ಹಾವೇರಿ ಹಾಗೂ ಇತರ ಶಾಖಾಮಠಗಳಲ್ಲಿ ಅವರ ಜಾತಿ-ಮತ-ಬೇಧ ನೋಡದೆ, ಪಂಕ್ತಿ ಬೇಧವಿಲ್ಲದೆ ನಿರಂತರ ಅನ್ನದಾಸೋಹವನ್ನು ನಡೆಸಿಕೊಂಡು ಬಂದಿದ್ದಾರೆ.

ಶ್ರೀಗಳು ಕಳೆದ 38 ವರ್ಷಗಳಿಂದ ಗದಗ ಮಠದಲ್ಲಿ ಒಂದೇ ಒಂದು ವಾರವೂ ನಿಲ್ಲದಂತೆ ಪ್ರತಿ ಸೋಮವಾರ ನಡೆಸಿಕೊಂಡು ಬಂದ ಶಿವಾನುಭವ ಕಾರ್ಯಕ್ರಮ ಒಂದು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಬಹುಶಃ ಕರ್ನಾಟಕ ಅಷ್ಟೇ ಏಕೇ? ಭಾರತ ದೇಶದ ಯಾವೊಂದು ಸಂಸ್ಥೆಯು ಇಂತಹ ಕಾರ್ಯಕ್ರಮ ಮಾಡಿಲ್ಲ. ಇಲ್ಲಿ ಸಮಾನತೆ ತಂಗಾಳಿ ಬೀಸಿದೆ. ಈ ವೇದಿಕೆ ಹಿಂದೂ, ಮುಸಲ್ಮಾನ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಪಾರ್ಸಿ ಮುಂತಾದ ಧರ್ಮಗಳ ಆಡಂಬೋಲವಾಗಿದೆ. ಎಲ್ಲಾ ರಂಗದ ಪ್ರತಿಭೆಗಳು ಇಲ್ಲಿ ಪ್ರಕಾಶಿಸಿವೆ. ಇದು ಸರ್ವ ಮತಭಾಂದವರ ವಿಚಾರ ವೇದಿಕೆಯಾಗಿ ಮಾರ್ಪಟ್ಟು ಸರ್ವಸಮಾನತೆ ಪ್ರೀತಿ ವಿಶ್ವಾಸಗಳ ಒಂದು ಟಂಕಶಾಲೆಯಾಗಿದೆ.

*ಪೋಸ್ಕೊ ಹೋರಾಟ*

ಉತ್ತರ ಕರ್ನಾಟಕ ಪಶ್ಚಿಮ ಘಟ್ಟ ಎಂದೇ ಕರೆಯಲ್ಪಡುವ ಕಪ್ಪತ್ತಗುಡ್ಡದ ಪರಿಸರದಲ್ಲಿ ಬರುವ ಡಂಬಳ ಮೊದಲಾದ ಊರುಗಳ 6000 ಎಕರೆ ಭೂಮಿ ವಶಪಡಿಸಿಕೊಂಡು ದಕ್ಷಿಣ ಕೋರಿಯಾ ಮೂಲದ ದೈತ್ಯ ಪೋಸ್ಕೋ ಕಂಪನಿ ಉಕ್ಕಿನ ಕೈಗಾರಿಕಾ ತೆರೆಯಲು ಮುಂದಾಗಿತ್ತು. ಕಬ್ಬಿಣದ ಅದಿರಿಗಾಗಿ ಕಪ್ಪತ್ತಗುಡ್ಡವನ್ನು ಆಶ್ರಯಿಸಿದ್ದ ಈ ಕಂಪನಿಯ ದುರುದ್ದೇಶ ತಿಳಿದ ಶ್ರೀಗಳು ಈ ಕೈಗಾರಿಕೆ ವಿರುದ್ಧ ಬೃಹತ್ ಚಳುವಳಿ ನಡೆಸಿದರು. ಶ್ರೀಗಳ ಹೋರಾಟದಲ್ಲಿ ನಾಡಿನ ಎಲ್ಲ ಜನಾಂಗದ ಮಠಾಧೀಶರು, ಪರಿಸರವಾದಿಗಳು, ಪತ್ರಕರ್ತರು, ಪರಿಸರವಾದಿ ಮೇಧಾ ಪಾಟ್ಕರ್​ ಅಲ್ಲದೆ ಅನೇಕ ರಾಜಕೀಯ ಮುಖಂಡರು ಭಾಗವಹಿಸಿದರು. ಶ್ರೀಗಳ ಹೋರಾಟದ ಬಗ್ಗೆ ಭಯಗೊಂಡ ಸರಕಾರ ಶ್ರೀಗಳಿಗೆ ಕೈಗಾರಿಕಾ ಸ್ಥಾಪಿಸುವುದಿಲ್ಲ ಎಂದು ಪತ್ರ ನೀಡಿ ಪರಿಸರ ವಿರೋಧಿ ಈ ಕೈಗಾರಿಕಾ ಸ್ಥಾಪಿಸುವುದನ್ನು ಕೈಬಿಟ್ಟಿತು. ಇಂತಹ ಹೋರಾಟ ದೇಶದಲ್ಲಿ ಯಶಸ್ವಿಯಾಗಿರುವದು ಅತಿ ವಿರಳ. ಇದೇ ಕಂಪನಿ ವಿರೋಧದ ಮಧ್ಯದಲ್ಲಿ ಓಡಿಸ್ಸಾದಲ್ಲಿ ಸ್ಥಾಪನೆಯಾಗಿದೆ.


*ಲಿಂಗೈಕ್ಯ:*

ಶಿಕ್ಷಣ ,ಆರೋಗ್ಯ ಸೇರಿದಂತೆ ಐದು ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿಯವರು ದಿನಾಂಕ ೨೦ ಆಕ್ಟೊಬರ ೨೦೧೮ ರಂದು (ವಯಸ್ಸು: 76) ಲಿಂಗೈಕ್ಯರಾದರು.

ಮರಣವೇ ಮಹಾನವಮಿ ಅಂದರೆ ದಸರಾ ಹಬ್ಬದ ಮರುದಿನವೇ ಲಿಂಗೈಕ್ಯ ರಾಗಿದ್ದಾರೆ. ಆ ದಿನವೇ ಅವರ ಪುಣ್ಯ ಸ್ಮರಣೆ ಮಾಡಲಾಗುತ್ತಿದೆ. ಇದು ಅವರ 3ನೆಯ ಪುಣ್ಯ ಸ್ಮರಣೆ.


*ಡಾಕ್ಟರ್ ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ.*

ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು: ಬಸವಣ್ಣವರ ಕರುಣೆ ದಯೆ ದಾಸೋಹ ಸಮಾನತೆಯ ಪ್ರಭುದೇವರ ನಿಶಿತಮತಿ ವೈರಾಗ್ಯ ಚೆನ್ನಬಸವಣ್ಣನವರ ಜ್ಞಾನ ಕ್ರಿಯಾಶೀಲತೆ ಹೋರಾಟ ಮತ್ತು ಅಕ್ಕನ ತೀವ್ರತೆ ಹಂಬಲ ಅಸಂಕ ಶರಣರ ಅವಿರತ ಕಾಯಕ ಮತ್ತು ತಾಯ್ತನ ಮುಂತಾದ ಗುಣಗಳೊಂದಿಗೆ ಜೀವಿಸಿದವರು. ಬಸವಾದಿ ಪ್ರಮಥರ ದಾರಿಯಲ್ಲಿ ಲಿಂಗಾಯತಕ್ಕೆ ಮರುಜೀವ ನೀಡಿ ಎಡೆಯೂರು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೆಯ ಜಗದ್ಗುರುಗಳಾಗಿ ಅವರ ನಡೆ ನುಡಿ ಕನ್ನಡ ನಾಡಿನ ಬಗ್ಗೆ ಇರುವ ಕಾಳಜಿ ಇಂದಿಗೂ ಅವಿಸ್ಮರಣೀಯ. ವಚನಗಳ ಓದಿನಿಂದ ಪ್ರಾರಂಭವಾದ ಜ್ಞಾನ ಅನುಸಂಧಾನ ಕನ್ನಡ ಸಾಹಿತ್ಯದ ಮೂಲಕ್ಕೆ ಸ್ಪರ್ಶಿಸಿ ಕನ್ನಡ ನಾಡು ನುಡಿ ನೆಲ ಜಲ ದ ಬಗ್ಗೆ ವಿಸ್ತರಿಸಿ ಕೆಲಸ ಮಾಡಿರುವುದು ಗದುಗಿನ ಶ್ರೀಮಠ ಜೀವಂತ ಸಾಕ್ಷಿಯಾಗಿದೆ.


*ರಾಷ್ಟ್ರೀಯ ಬಸವ ಪ್ರಶಸ್ತಿ-ಪುರಸ್ಕಾರ ಪರಮಪೂಜ್ಯ ಡಾ. ಬಸವಲಿಂಗ ಪಟ್ಟದೇವರು:*

ಭಾಲ್ಕಿ ಕರ್ನಾಟಕದ ಉತ್ತರದ ತುತ್ತ ತುದಿಯಲ್ಲಿರುವ ನಗರ. ಬಸವಾದಿ ಶಿವಶರಣರ ಸಾಮಾಜಿಕ ಧಾರ್ಮಿಕ ಆರ್ಥಿಕ ರಾಜಕೀಯ ಕ್ರಾಂತಿ ನಡೆದಾಗ ತುಂಬಾ ಹತ್ತಿರದಲ್ಲಿದ್ದ ಸ್ಥಳ ಭಾಲ್ಕಿ. ಅಲ್ಲಿನ ಹಿರಿಯ ಮಠ , ಆ ಮಠದ ಪರಮಪೂಜ್ಯ ಡಾ. ಚನ್ನಬಸವ ಪಟ್ಟದೇವರು ಬಸವಾದಿ ಶರಣರ ಪರಮ ಕಾರುಣ್ಯ ವೆಂಬಂತೆ ಜನಿಸಿ ಬಂದು ಈ ನಾಡಿಗಾಗಿ ಹಗಲಿರುಳು ಶ್ರಮಿಸಿದವರು. ಈ ಪೀಠ ಪರಂಪರೆಯ ನಂತರ ಉತ್ತರಾಧಿಕಾರಿಯಾಗಿ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರ ಮಾರ್ಗದಲ್ಲಿಯೇ ನಡೆದು ಮತ್ತಷ್ಟು ಉನ್ನತಕ್ಕೆ ತೆಗೆದುಕೊಂಡು ಬಂದಿದ್ದಾರೆ. ಕರ್ನಾಟಕದ ಹೃದಯಭಾಗವಾದ ಗದುಗಿನ ತೋಂಟದಾರ್ಯ ಶ್ರೀಮಠದ ಮತ್ತು ಹಿರಿಯ ಪೂಜ್ಯರೊಂದಿಗೆ ಹೊಂದಿದ ಸಂಬಂಧ ಅದು ಹೃದಯ ಮತ್ತು ಮೆದುಳಿನ ಸಂಬಂಧವಾಗಿತ್ತು.

ಭಾಲ್ಕಿಯ ಪೂಜ್ಯರು ಕರ್ನಾಟಕ ತೆಲಂಗಾಣ ಆಂದ್ರ ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ತಮ್ಮ ಅಪಾರ ಭಕ್ತರನ್ನು ಹೊಂದಿ ಕನ್ನಡದ ಕಾಯಕ ಮಾಡಿ ಕನ್ನಡಿಗರನ್ನು ಸಂಘಟಿಸಿ ಮಹಾರಾಷ್ಟ್ರ ಬಸವ ಪರಿಷತ್ತು ಆಂಧ್ರ ಬಸವ ಪರಿಷತ್ತು ಸ್ಥಾಪಿಸಿ ಬಸವಾದಿ ಶರಣರ ನುಡಿತೆರನ್ನು ಸಮರ್ಥವಾಗಿ ಅವರು ಮುನ್ನಡೆಸಿದ್ದಾರೆ.

ಇಂತಹ ಪುಜ್ಯರಿಗೆ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿ ಕರ್ನಾಟಕ ಸರಕಾರ ಗೌರವಿಸಿದೆ.

*ಡಾ. ತೋಂಟದ ಸಿದ್ಧಲಿಂಗ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಚ್. ಎನ್. ನಾಗಮೋಹನದಾಸ.*

ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದ ಶ್ರೀ ಎಚ್ ಎನ್ ನಾಗಮೋಹನ ದಾಸ್ ಅವರ ಕರ್ನಾಟಕದ ಗಡಿ ಜಿಲ್ಲೆ ಕೋಲಾರದ ಮುಳಬಾಗಿಲು ತಾಲೂಕಿನ ಹೆಬ್ಬಣ್ಣಿ ಗ್ರಾಮದ ವರು. ತಂದೆ ಸ್ವಾತಂತ್ರ್ಯ ಹೋರಾಟಗಾರರು ಎಚ್.ಎನ್. ನಾಗಪ್ಪ ತಾಯಿ ಪಾರ್ವತಮ್ಮನವರ ಸನ್ಮಾರ್ಗದಲ್ಲಿ ಬೆಳೆದು 1977 ರಲ್ಲಿ ಬೆಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿ ಎಲ್ಲ ರೀತಿಯ ವಿವಾದಗಳನ್ನು ಕಾನೂನಾತ್ಮಕವಾಗಿ ಪರಿಹರಿಸುವಲ್ಲಿ ನೈಪುಣ್ಯತೆಯನ್ನು ಹೊಂದಿ 2004 ರಲ್ಲಿ ಭಾರತದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ 2014ರಲ್ಲಿ ನಿವೃತ್ತರಾದರು. ನ್ಯಾಯಮೂರ್ತಿಗಳಾಗಿ ಇದ್ದ ಅವರು ವರ್ಷಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿ ನೊಂದವರ ನೋವಿಗೆ ನ್ಯಾಯವನ್ನು ಒದಗಿಸಿ ಇತಿಹಾಸ ನಿರ್ಮಿಸಿದ್ದಾರೆ. ವಿದ್ಯಾರ್ಥಿ ಇದ್ದಾಗಿನಿಂದಲೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡ ಶ್ರೀಗಳು ವಕೀಲ ಸಂಘದ ಕಾರ್ಯದರ್ಶಿಗಳಾಗಿ ಅಖಿಲ ಭಾರತ ವಕೀಲ ಸಂಘದ ಕರ್ನಾಟಕ ಘಟಕದ ಸಂಚಾಲಕರಾಗಿ ಕಾರ್ಯನಿರ್ವಹಿಸಿ ಭಾರತ ಸಂವಿಧಾನದ ಮತ್ತು ಶಾಸನಬದ್ಧ ಕಾನೂನು ಗಳ ಬಗ್ಗೆ ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಇದರೊಂದಿಗೆ ಕಾನೂನಿನ ಅರಿವು ನೀಡುವ ಅನೇಕ ಗ್ರಂಥಗಳ ಲೇಖಕರಾಗಿದ್ದಾರೆ. "ಸಂವಿಧಾನ ಓದು" ಅವರು ಬರೆದ ಇತ್ತೀಚಿನ ಪುಸ್ತಕ. ಪ್ರಸ್ತುತ ರೂಪಾಯಿ 5 ಲಕ್ಷಗಳ ನಗದು ಪುರಸ್ಕಾರ ಹಾಗೂ ಡಾ. ತೋಂಟದ ಸಿದ್ದಲಿಂಗ ಶ್ರೀಗಳ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲೇಖಕರು: 🖋️ ಶಾಂತಯ್ಯಾ ಕೆ. ಸ್ವಾಮಿ ಉಚ್ಛ ತಾ. ಭಾಲ್ಕಿ


Show more
0
158
https://avalanches.com/in/bidar__1899931_14_10_2021

ಕಲ್ಯಾಣ ಕ್ರಾಂತಿ ಹಾಗೂ ಮರಣವೇ ಮಹಾನವಮಿ ವಿಜಯೋತ್ಸವ.


12ನೇ ಶತಮಾನದಲ್ಲಿ ಶರಣರು ಮರಣವನ್ನು ಕೂಡ ಮಹಾನವಮಿಯಾಗಿ ಸ್ವೀಕರಿಸಿದವರು. ಬಸವಣ್ಣರ ಮಾರ್ಗದರ್ಶನದಲ್ಲಿ ಅಸಮಾನತೆ ವರ್ಣಭೇದದ ನಿವಾರಣೆಯ ಹೋರಾಟದ ಫಲವಾಗಿ ಶರಣರು ಕಲ್ಯಾಣಕ್ಕೆ ಬಂದಿದ್ದು ಮತ್ತು ಹೋರಾಟ ಯಶಸ್ವಿಯಾಗಿದ್ದು ಕಂಡುಬರುತ್ತದೆ.


ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ

ನೀವು ಬಂದ ಕಾರ್ಯಕ್ಕೆ ನಾವು ಬಂದೆನಯ್ಯ

ನಾವು ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯ

ಕಲ್ಯಾಣವೆಂಬುದು ಪ್ರಣತೆಯಾಗಿತ್ತು

ನಾನು ತೈಲವಾದೇನು, ನೀವು ಬತ್ತಿಯಾದಿರಿ, ಪ್ರಭುದೇವರು ಜ್ಯೋತಿಯಾದರು,

ಪ್ರಣತೆ ಒಡೆದಿತ್ತು, ತೈಲ ಚೆಲ್ಲಿತ್ತು, ಬತ್ತಿ ಜಾರಿತಯ್ಯ, ಜ್ಯೋತಿ ನಂದಿತಯ್ಯ,

ನಮ್ಮ ಕೂಡಲಸಂಗನ ಶರಣರ ಮನ ನೊಂದಿತಯ್ಯ.


ಈ ವಚನವನ್ನು ನೋಡಿದಾಗ ಕಲ್ಯಾಣದಲ್ಲಿ ಆದ ಕಲ್ಯಾಣ ಕ್ರಾಂತಿಯ ಆರಂಭ ಮತ್ತು ಅಂತ್ಯದ ಬಗ್ಗೆ ಕಣ್ಣಿಗೆ ಕಟ್ಟುವಂತೆ ಬಸವಣ್ಣನವರು ತಿಳಿಸಿದ್ದಾರೆ ಇದು ಕಲ್ಯಾಣ ಕ್ರಾಂತಿಯ ಸಂದರ್ಭಕ್ಕೆ ಸಾಕ್ಷಿಯಾದ ವಚನ. ಅಗ್ರಜನ ಪುತ್ರಿ ಅಂತ್ಯಜನ ಪುತ್ರನ ಕೈಹಿಡಿಯುವ ಮೂಲಕ ಸಮಾನತೆಯನ್ನು ಸಾರಿದರು. ಸಮಗಾರ ಜಾತಿಯ ಹರಳಯ್ಯರ ಮಗ ಹಾಗೂ ಬ್ರಾಹ್ಮಣ ಮಧುವರಸರ ಮಗಳು ಲಾವಣ್ಯರ ಮದುವೆ ಅಸ್ಪೃಶ್ಯತೆ ನಿವಾರಣೆಗೆ ನಾಂದಿ ಹಾಡಿತು. ಇದು ಧರ್ಮ ಬಾಹಿರವೆಂದು ಮೇಲ್ವರ್ಗದ ಜನರು ಕಲ್ಯಾಣದ ದೊರೆ ಬಿಜ್ಜಳನಿಗೆ ಕಿವಿ ಚುಚ್ಚಿದರು.

ಬಸವಣ್ಣನವರು ಬಿಜ್ಜಳ ರಾಜನ ಅತ್ಯಂತ ಪ್ರೀತಿಯ ಮಂತ್ರಿಯಾಗಿದ್ದರು. ಬಸವಣ್ಣನವರ ನಯ-ವಿನಯ ಕಾರ್ಯಕ್ಷಮತೆಗೆ ಮಾರುಹೋಗಿದ್ದ ಬಿಜ್ಜಳರಿಗೆ ಬಸವಣ್ಣನವರು ಒಂದು ಕಡೆಯಾದರೆ ಸಂಪ್ರದಾಯವಾದಿಗಳು ಬ್ರಾಹ್ಮಣರು ಇನ್ನೊಂದು ಕಡೆಯಾದರೂ ಬಸವಣ್ಣನವರಿಗೆ ಮನವೊಲಿಸಿ ಏನಾದರೂ ಮಾಡಬೇಕೆಂದು ಎಷ್ಟೇ ಕಷ್ಟಪಟ್ಟರೂ ಬಿಜ್ಜಳರು ಏನೇ ನುಡಿದರು ಫಲಿಸಲಿಲ್ಲ .

ಇದು ರಾಜರಿಗೆ ನುಂಗಲಾರದ ತುತ್ತಾಗಿ ತಮ್ಮ ಸ್ಥಾನದಿಂದ ಕೆಳಗಿಳಿದರು. ಆಗ ಅವರ ಮಗ ಸೋವೀದೇವ ಆಡಳಿತದ ಚುಕ್ಕಾಣಿಯನ್ನು ಹಿಡಿದು ಕೂರಲು ಮೇಲ್ವರ್ಗದ ಸಂಪ್ರದಾಯವಾದಿಗಳು ಅವರ ಕಿವಿಗೆ ಬಸವಣ್ಣನವರ ಬಗ್ಗೆ ಅನೇಕ ರೀತಿಯಲ್ಲಿ ಹೇಳಿ ಅವರನ್ನು ಕಲ್ಯಾಣದಿಂದ ಗಡಿಪಾರು ಮಾಡುವಂತೆ ಸೂಚಿಸಿದರು. ಇದರಂತೆಯೇ ಬಸವಣ್ಣನವರು ಗಡಿ ಪಾರಾದರು. ಶರಣರ ಬೆನ್ನೆಲುಬಾಗಿದ್ದ ಬಸವಣ್ಣನವರು ಒಂದೇ ಸಲ ಗಡಿಪಾರಾದ ಸುದ್ದಿ ಕೇಳಿ ಶರಣರಲ್ಲಿ ಆತಂಕ ಶುರುವಾಯಿತು.

ಹರಳಯ್ಯ, ಮಧುವರಸ ಹಾಗೂ ಶೀಲವಂತರಿಗೆ ಮರಣದಂಡನೆ ಶಿಕ್ಷೆಯನ್ನು ಆದೇಶವಾದಾಗ ನಿರ್ಲಜ್ಜ ಶಾಂತಯ್ಯನವರು ಬಿಜ್ಜಳನಲ್ಲಿಗೆ ಹೋಗಿ ಅದನ್ನು ರದ್ದುಗೊಳಿಸಲು ವಿನಂತಿಸುತ್ತಾರೆ, ಆದರೆ ಇದಕ್ಕೆ ಬಿಜ್ಜಳನು ಒಪ್ಪುವುದಿಲ್ಲ, ಆಗ

ನಿರ್ಲಜ್ಜ ಶಾಂತಯ್ಯನವರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರೂ ಬಿಜ್ಜಳನು ಯಾವುದೇ ಪ್ರತಿಕ್ರಿಯೆ ತೋರಲಿಲ್ಲ ಇದನ್ನು ನೋಡಿದ ಶಿಷ್ಯೆ ಸೋಮವ್ವೇ ಆಗಮಿಸಿ ಗುರುಗಳ ನಿಲುವನ್ನು ವಿರೋಧಿಸಿ ಉಪವಾಸ ಮಾಡಿ ಸಾಯುತ್ತೇವೆ ಎಂದರೆ ಹೇಡಿತನ ವಾಗುತ್ತದೆ, ಲೋಕದ ಜನರು ನಿಮಗೇನಂದಾರು ಎಂದು ನುಡಿದಳು. ಆದರೆ ಹಿಂಸೆಗೆ ಎಂದು ಪ್ರಚೋದಿಸಿದ ಗುರುಗಳು ಆಕೆಯನ್ನು ಅನೇಕ ರೀತಿಯಲ್ಲಿ ಬುದ್ಧಿವಾದ ಹೇಳಿ ಬೋಧನೆಯ ಮಾತುಗಳನ್ನು ಹೇಳಿ ಶಾಂತ ಪಡಿಸುತ್ತಾರೆ. ಆದರೆ ಆ ಕಡೆ ಬಿಜ್ಜಳನ ಸೈನ್ಯರು ಉಪವಾಸ ಕುಳಿತ ಜನರನ್ನು ಜೈಲಿಗೆ ತಳ್ಳುತ್ತಾರೆ. ಹರಳಯ್ಯ ಮಧುವರಸರನ್ನು ಆನೆ ಕಾಲಿಗೆ ಕಟ್ಟಿ (ಹೊಟ್ಟೆ )ಎಳೆಹೂಟೆ ಶಿಕ್ಷೆಯನ್ನು ನೀಡಿದಾಗ ಮತ್ತು ಲಿಂಗಾಯತ ಧರ್ಮ ಪಾಲಿಸುತ್ತಿದ್ದ ಜನರು ಚಾತುರ್ವರ್ಣದ ಮಾದರಿಗೆ ಮರಳಬೇಕು ಎಂದು ಬಿಜ್ಜಳನು ಆಜ್ಞಾಪಿಸಿದನು. ಇದರಿಂದ ಮನನೊಂದು ಕೋಪಗೊಂಡ ಸೋಮವ್ವ ತನ್ನ ಮಗನಾದ ಜಗದೇವ ಮತ್ತು ಮಲ್ಲಿಬೊಮ್ಮರನ್ನು "ನೀವು ಅರಸ ಬಿಜ್ಜಳನ ಶಿರಚ್ಛೇದನ ಮಾಡಬೇಕು ಅಲ್ಲಿಯವರೆಗೆ ನಿಮಗೆ ಅನ್ನವನ್ನು ನೆಲದ ಮೇಲೆಯೇ ಹಾಕುವೆನು" ಎಂದು ಪ್ರತಿಜ್ಞೆ ಮಾಡಿದರು. ಸುಮಾರು ದಿನಗಳ ಕಾಲ ಹೊಂಚುಹಾಕಿ ಕೊನೆಗೆ ಬಿಜ್ಜಳನ ಶಿರಚ್ಛೇದನ ಮಾಡಿದರು. ಹಾಗೂ ಅರಸರಿಗೆ ಶರಣರ ಕುರಿತಾಗಿ ಚಾಡಿ ಹೇಳಿದ ಅನೇಕರನ್ನು ಕೊಲೆ ಮಾಡಿದರು.


ಜೊಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯ

ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯ

ಕೇಳು, ಕೂಡಸಂಗಮದೇವಾ ಮರಣವೇ ಮಹಾನವಮಿ


'ಕಲ್ಯಾಣ ಕ್ರಾಂತಿ'ಯ ಸಂದರ್ಭದಲ್ಲಿ ಮಾಚಿದೇವರು ಹೊತ್ತ 'ಜವಾಬ್ಧಾರಿ' ಗುರುತರವಾದುದು. ಶರಣ ಧರ್ಮ ಸಂರಕ್ಷಣೆ - ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು, ಚನ್ನ ಬಸವಣ್ಣ, ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ 'ಭೀಮ ರಕ್ಷೆಯಾಗಿ' ನಿಂತರು.

ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ, ಅಕ್ಕನಾಗಮ್ಮ, ಕಿನ್ನರಿಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ 'ಭೀಮ ರಕ್ಷೆಯಾಗಿ' ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ, ತಡ ಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಸಾಹಸಿ ಮಾಚಯ್ಯ.

ತಮ್ಮ ಇಡೀ ಜೀವನವನ್ನೇ ಜನಕಲ್ಯಾಣ ಚಿಂತನೆಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದರು ಅವರ ಮನ ನೋಯಿಸಿದ ದಿನವೇ ಮಹಾನವಮಿ ದಿನದಂದು.

ಲೇಖಕರು : 🖋️ ಶಾಂತಯ್ಯಾ ಕೆ. ಸ್ವಾಮಿ ಉಚ್ಛ ತಾ. ಭಾಲ್ಕಿ ಜಿ. ಬೀದರ

Show more
0
117
https://avalanches.com/in/bidar__152_1899047_01_10_2021
https://avalanches.com/in/bidar__152_1899047_01_10_2021

*ಮಹಾತ್ಮ ಗಾಂಧೀಜಿ ಅವರ 152ನೆಯ ಜನ್ಮ ದಿನಾಚರಣೆ.*


ಮೋಹನ್ ದಾಸ್ ಗಾಂಧಿ ಬ್ರಿಟಿಷ್ ಆಳ್ವಿಕೆಯ ಭಾರತದ ಪಶ್ಚಿಮ ಭಾಗದ ಗುಜರಾತ ನ ಪೊರಬಂದರನಲ್ಲಿ ಅಕ್ಟೋಬರ್ 2, 1869 ರಂದು ಜನಿಸಿದರು.ಅವರ ತಂದೆ ಕರಮಚಂದ್ ಗಾಂಧಿ ಬ್ರಿಟಿಷರ ಆಳ್ವಿಕೆಯಲ್ಲಿ ಪೊರಬಂದರ್ ನ ದಿವಾನರಾಗಿದ್ದರು. ತಾಯಿ ಪುತಲಾಬಾಯಿ ಗೃಹಿಣಿಯಾಗಿದ್ದರು. ನಾಚಿಕೆ ಸ್ವಭಾವದವರಾಗಿದ್ದ ಇವರು ಬಾಲ್ಯದಲ್ಲಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಇತರ ಮಕ್ಕಳೊಂದಿಗೆ ಸುಲಭವಾಗಿ ಬೆರೆಯುತ್ತಿರಲಿಲ್ಲ. ಪ್ರತಿದಿನ ಬೆಳಿಗ್ಗೆ ಸರಿಯಾದ ಸಮಯಕ್ಕೆ ಶಾಲೆಗೆ ಹೋಗುತ್ತಿದ್ದರು. ಶಾಲೆಯಿಂದ ನೇರವಾಗಿ ಮನೆಗೆ ಬರುತ್ತಿದ್ದರು. ಅವರ ಏಕೈಕ ಒಡನಾಡಿ ಎಂದರೆ ಪುಸ್ತಕ. ತಮ್ಮ ಬಿಡುವಿನ ಸಮಯದಲ್ಲಿ ಅವರು ಒಬ್ಬರೇ ಪುಸ್ತಕ ಓದುತ್ತಿದ್ದರು. ಅವರ ನೆಚ್ಚಿನ ಗೆಳೆಯ ಉಕಾ ಎನ್ನುವವರಾಗಿದ್ದರು.

ಹದಿಮೂರನೇ ವಯಸ್ಸಿನಲ್ಲಿ ಅದೇ ವಯಸ್ಸಿನ ಕಸ್ತೂರ್ಬಾಯಿಯನ್ನು ಮದುವೆಯಾದರು. ಅವರ ತಂದೆಯ ಮರಣದ ನಂತರ, ಗಾಂಧಿಯವರ ಕುಟುಂಬವು ಅವರನ್ನು 1888 ರಲ್ಲಿ ಇಂಗ್ಲೆಂಡಿಗೆ ಕಾನೂನು ಅಧ್ಯಯನಕ್ಕಾಗಿ ಕಳುಹಿಸಿತು. ಅಲ್ಲಿ, ಅವರು ಅಹಿಂಸೆಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು, ಭಗವದ್ಗೀತೆ, ಹಿಂದೂ ಪವಿತ್ರ ಗ್ರಂಥ ಮತ್ತು ಕ್ರಿಶ್ಚಿಯನ್ ಬೈಬಲ್‌ನಲ್ಲಿ ಯೇಸುಕ್ರಿಸ್ತನ ಪರ್ವತದ ಮೇಲಿನ ಧರ್ಮೋಪದೇಶದಲ್ಲಿ ವ್ಯಕ್ತಪಡಿಸಿದಂತೆ. ಅವರು ಬಾರ್ ಅನ್ನು ದಾಟಿದ ನಂತರ 1891 ರಲ್ಲಿ ಭಾರತಕ್ಕೆ ಮರಳಿದರು.

ಅವರ ಬಾಲ್ಯದಲ್ಲಿ ಬಹಳ ಪ್ರಭಾವ ಬೀರುವ ಎರೆಡು ಪುಸ್ತಕಗಳು ಎಂದರೆ ಲಿಯೋ ಟಾಲ್ಸ್ಟಾಯ್ ಮತ್ತು ದೇವರ ರಾಜ್ಯ ನಿಮ್ಮೊಳಗೆ ಇದೆ .( Lio Tolstoy and Kingdom of God within You). ಗಾಂಧಿ ಮತ್ತು ಟಾಲ್ಸ್ಟಾಯ್ ಜೀವನದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಪ್ರೀತಿಯ ಮಾರ್ಗವನ್ನು ಅನುಸರಿಸಬೇಕು ಎಂದಿದ್ದರು. ಇದು ಅವರ ಪ್ರತಿಭಟನೆಯ ವಿಚಾರಗಳ ಮೇಲೆ ಪ್ರಭಾವ ಬೀರಿದ್ದವು. ಗಾಂಧೀಜಿ ಅವರು ತನ್ನ ದೇಶ ಮತ್ತು ಜನರ ಮೇಲೆ ಪ್ರಭಾವವನ್ನು ಹೊಂದಿದ್ದರು.

ಮೋಹನ ದಾಸ್ ಕರಮಚಂದ್ ಗಾಂಧಿ 20ನೆಯ ಶತಮಾನದ ಶ್ರೇಷ್ಠ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕರಲ್ಲಿ ಮುಂಚೂಣಿಯಲ್ಲಿದ್ದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಎಂದು ಗೌರವಿಸ ಲ್ಪಟ್ಟ ಅವರು ಸತ್ಯಾಗ್ರಹದ ತತ್ವವನ್ನು ಪ್ರವರ್ತಿಸಿದರು ಮತ್ತು ಅಭ್ಯಾಸ ಮಾಡಿದರು. ಅಹಿಂಸೆ ಅವರ ಜೀವನದ ಮಂತ್ರವಾಗಿತ್ತು.

ಗಾಂಧೀಜಿಯವರ ಪ್ರಕಾರ ಸತ್ಯ ಶಾಂತಿ ಅಹಿಂಸೆ, ತಪ್ಪೊಪ್ಪಿಗೆ ಸಾಕ್ಷಾತ್ಕಾರ ಪಶ್ಚಾತ್ತಾಪದ ಶುದ್ಧ ರೂಪ ಎಂದಿದ್ದರು.

ದಕ್ಷಿಣ ಆಫ್ರಿಕಾದಲ್ಲಿ, ಅವರು ಅಲ್ಲಿನ ಭಾರತೀಯ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸುವ ಪ್ರಯತ್ನಗಳಲ್ಲಿ ತೊಡಗಿದರು, ಅವರು ಬ್ರಿಟಿಷರು ಮತ್ತು ಬೋಯರ್ಸ್‌ನಿಂದ ತುಳಿತಕ್ಕೊಳಗಾದರು, ಈ ಪ್ರದೇಶದ ಮೂಲ ಡಚ್ ವಸಾಹತುಗಾರರ ವಂಶಸ್ಥರು. ಒಂದು ವರ್ಷ ಉಳಿಯುವ ಉದ್ದೇಶದಿಂದ, ಅವರು 1914 ರವರೆಗೆ ಉಳಿದುಕೊಂಡರು (ಅವರ ಪತ್ನಿ ಮತ್ತು ಮಕ್ಕಳು ಅವರೊಂದಿಗೆ ಸೇರಿಕೊಂಡರು, ಅವರು ನಟಾಲ್ ಇಂಡಿಯನ್ ಕಾಂಗ್ರೆಸ್ ಅನ್ನು ಸ್ಥಾಪಿಸಿದರು.

ಗಾಂಧೀಜಿ ಅವರ ಪ್ರಕಾರ ಶಿಕ್ಷಣ: ಎಂದರೆ ಮಗುವನ್ನು ಮನುಷ್ಯನನ್ನಾಗಿ ಮಾಡುವ ಸರ್ವತ್ರ ಸಾಧನ. ದೇಹ ಮೆದುಳು ಹಾಗೂ ಚೈತನ್ಯವನ್ನು ರೂಪಿಸುವುದು ಶಿಕ್ಷಣ.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ಪಿನಿಕ್ಸ್ ನಲ್ಲಿದ್ದಾಗ ತಮ್ಮ ಆಶ್ರಯದಲ್ಲಿ ಒಂದು ಶಾಲೆಯನ್ನು ಪ್ರಾರಂಭಿಸಿದರು. ಮಕ್ಕಳನ್ನು ಜಗತ್ತಿನ ಅರಿವು ಮೂಡಿಸುವುದು ಅಷ್ಟೇ ಅಲ್ಲದೇ ಅವರನ್ನು ಸಜ್ಜನರನ್ನಾಗಿ ರೂಪಿಸುವುದು ಅವರ ಶಾಲೆಯ ಉದ್ದೇಶವಾಗಿತ್ತು.

ಪರೀಕ್ಷೆಗಳ ಮೂಲಕ ಮಕ್ಕಳ ನೆನಪಿನ ಶಕ್ತಿಯನ್ನು ಅಳೆಯುವುದು ಅವರಿಗೆ ಬೇಕಿರಲಿಲ್ಲ ಎಲ್ಲರಿಗೂ ಒಂದೇ ಪ್ರಶ್ನೆ ನೀಡಿ ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಕುತೂಹಲದಿಂದ ನೋಡುತ್ತಿದ್ದರು.

ಹೆಚ್ಚು ಅಂಕ ಗಳಿಸಿದ ಮಕ್ಕಳು ಸಂತುಷ್ಟರಾದರೆ ಇನ್ನಷ್ಟು ಕಲಿಯುವುದರಿಂದ ವಿಮುಖವಾದರೆ ಅಂತಹವರನ್ನು ಗಮನಹರಿಸುತ್ತಿದ್ದರು. ಕಡಿಮೆ ಅಂಕ ಪಡೆದ ಮಕ್ಕಳನ್ನು , ತಪ್ಪು ತಿದ್ದಿಕೊಂಡು ಕಷ್ಟಪಡುವ ಮಕ್ಕಳನ್ನು ಹುರಿದುಂಬಿಸುತ್ತಿದ್ದರು.

ಗಾಂಧೀಜಿಯವರು ಅಂಗಿ ಹಾಕುತ್ತಿರಲಿಲ್ಲ , ಅದನ್ನು ಕಂಡ ಒಬ್ಬ ವಿದ್ಯಾರ್ಥಿ , ಬಾಪು ನೇವೇಕೆ ಕುರ್ತಾ ಹಾಕುವುದಿಲ್ಲ ಎಂದು ಪ್ರಶ್ನಿಸಿದ. ಅದಕ್ಕೆ ಗಾಂಧೀಜಿ ನನ್ನಿಂದ ಖರೀದಿಸಲು ಆಗುವುದಿಲ್ಲ ಎನ್ನುತ್ತಾರೆ. ಆಗ ಬಾಲಕ ನಮ್ಮ ಅಮ್ಮನಿಗೆ ಹೇಳುವೆ ಅವಳು ಹೊಲೆದು ಕೊಡುತ್ತಾಳೆ , ನಾ ಕೇಳಿದರೆ ಅಮ್ಮ ಇಲ್ಲ ಎನ್ನುವುದಿಲ್ಲ ಎಂದನು.

ಆಗ ಬಾಪು ನಗುತ್ತಾ ಮಗು ನನ್ನ ಸಹೋದರ ಸಹೋದರಿ ಯರು ದೇಶದಲ್ಲಿ 40 ಕೋಟಿ ಜನ ಇದ್ದಾರೆ. ಅವರೆಲ್ಲರಿಗೂ ಬಟ್ಟೆ ಇಲ್ಲ. ಅವರೆಲ್ಲರೂ ಅಂಗಿ ಹಾಕದ ಸ್ಥಿತಿಯಲ್ಲಿ ನಾನೊಬ್ಬ ಹೇಗೆ ಹಾಕಲಿ ಅವರೆಲ್ಲರೂ ಬಟ್ಟೆ ಹಾಕಿಕೊಳ್ಳುವ ಸ್ಥಿತಿ ಬಂದ ಮೇಲೆ ನೋಡೋಣ ಎಂದರು.

ಗಾಂಧೀಜಿಯವರು ತಮ್ಮ ದೇಶ ಹಾಗೂ ಜನರ ಮೇಲೆ ಪ್ರಭಾವವನ್ನು ಹೊಂದಿದ್ದರು.

ಇದು ಭಾರತೀಯ ಹಿತಾಸಕ್ತಿಗಳನ್ನು ಹೆಚ್ಚಿಸಲು ಕೆಲಸ ಮಾಡಿತು ಮತ್ತು ಭಾರತೀಯ ವೈದ್ಯಕೀಯ ದಳಕ್ಕೆ ಬ್ರಿಟಿಷರ ಕಡೆಯಿಂದ ಹೋರಾಡಿದರು.

ಯುದ್ಧದ ನಂತರ, ನಾಯಕರಾಗಿ ಗಾಂಧಿಯವರ ಖ್ಯಾತಿ ಬೆಳೆಯಿತು. ಅವರು ತಮ್ಮ ವೈಯಕ್ತಿಕ ತತ್ವಗಳಲ್ಲಿ ಇನ್ನಷ್ಟು ಅಚಲರಾದರು, ಲೈಂಗಿಕ ಇಂದ್ರಿಯ ನಿಗ್ರಹವನ್ನು ಅಭ್ಯಾಸ ಮಾಡಿದರು. ಆಧುನಿಕ ತಂತ್ರಜ್ಞಾನವನ್ನು ತ್ಯಜಿಸಿದರು ಮತ್ತು ಸತ್ಯಾಗ್ರಹವನ್ನು ಅಭಿವೃದ್ಧಿಪಡಿಸಿದರು. ಅಕ್ಷರಶಃ "ಆತ್ಮ-ಶಕ್ತಿ". ಸತ್ಯಾಗ್ರಹವು ಅಹಿಂಸಾತ್ಮಕ ಪ್ರತಿರೋಧದ ಒಂದು ವಿಧಾನವಾಗಿದೆ, ಇದನ್ನು "ಅಸಹಕಾರ" ಎಂದು ಕರೆಯುತ್ತಾರೆ, ಅವರು ಮತ್ತು ಅವರ ಮಿತ್ರರಾಷ್ಟ್ರಗಳು ದಕ್ಷಿಣ ಆಫ್ರಿಕಾದ ಬಿಳಿ ಸರ್ಕಾರಗಳ ವಿರುದ್ಧ ಹೆಚ್ಚಿನ ಪರಿಣಾಮವನ್ನು ಬೀರುತ್ತಿದ್ದರು. ಶಿಕ್ಷೆ ಮತ್ತು ಜೈಲನ್ನು ಸಹಿಸಿಕೊಳ್ಳುವ ಅವರ ಇಚ್ಛೆ ಗಾಂಧಿಯವರ ಸ್ಥಳೀಯ ಭಾರತದಲ್ಲಿ ಜನರ ಮೆಚ್ಚುಗೆಯನ್ನು ಗಳಿಸಿತು.

ಆಗಸ್ಟ್ 1947 ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯಿತು - ಹಾಗೆಯೇ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ದೇಶಗಳಾಗಿ ವಿಭಜನೆಯಾಯಿತು. ಆದಾಗ್ಯೂ, ಭಾರತದ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕ್ರಮವು ನೆರವಾಗಲಿಲ್ಲ, ಮತ್ತು ದೇಶವು ತಕ್ಷಣವೇ ಕುಸಿಯಿತು: ಹಿಂದೂಗಳು ಮತ್ತು ಮುಸ್ಲಿಮರು ಒಬ್ಬರನ್ನೊಬ್ಬರು ಆತಂಕಕಾರಿ ಸಂಖ್ಯೆಯಲ್ಲಿ ಕೊಂದರು, ಆದರೆ ನಿರಾಶ್ರಿತರು ಗಡಿಯ ಕಡೆಗೆ ಓಡಿಹೋದರು. ಎದೆಗುಂದಿದ ಗಾಂಧಿ ದೇಶವನ್ನು ಶಾಂತಗೊಳಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. 1948 ರ ಜನವರಿ 30 ರಂದು ದೆಹಲಿಯಲ್ಲಿ ಅವರನ್ನು ಹಿಂದೂ ರಾಷ್ಟ್ರೀಯವಾದಿ ನಾತುರಾಮ ಗೋಡ್ಸೆ ಅವರು ಹತ್ಯೆಗೈದರು, ಮತ್ತು ಭಾರತವು ತನ್ನ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿತು.

ಗಾಂಧೀಜಿಯವರ ಪ್ರಕಾರ ಭಾರತದಲ್ಲಿ ಪ್ರತಿಯೊಂದು ವರ್ಗದ ಜನರು - ಶ್ರೀಮಂತರು ಮತ್ತು ಬಡವರು, ದೀನರೂ, ಬ್ರಾಹ್ಮಣರು ಮತ್ತು ಶೂದ್ರರು ಒಟ್ಟಾಗಿ ಜೀವನ ನಡೆಸಬೇಕು. ಯಾವುದೇ ಕ್ಷೇತ್ರದಲ್ಲಿ ಯಾವುದೇ ತಾರತಮ್ಯ ಇರಬಾರದು. ಭಾರತದ ಪ್ರತಿಯೊಬ್ಬ ಜನರು ಅದನ್ನು ತಮ್ಮ ದೇಶವೆಂದು ಭಾವಿಸಬೇಕು. ರಾಜಕೀಯ ಅಸ್ಥಿರತೆ, ಲಿಂಗ ವಿರೋಧವಿಲ್ಲ, ಪ್ರತಿ ಮಹಿಳೆ ಮಧ್ಯರಾತ್ರಿಯಲ್ಲಿ ಮುಕ್ತವಾಗಿ ನಡೆಯಬಹುದು, ಮಾದಕ ದ್ರವ್ಯಗಳು, ಸಾರಾಯಿ ಮಾರಾಟ ಮುಕ್ತ ಭಾರತದ ಕನಸು ಕಂಡಿದ್ದರು.

ನಾವು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಇನ್ನೊಂದು ಜನ್ಮ ದಿನವನ್ನು ಆಚರಿಸಿದ್ದೇವೆ. ರಾಷ್ಟ್ರಪಿತ ಗಾಂಧೀಜಿ ಮುಕ್ತ ಭಾರತಕ್ಕಾಗಿ ದೂರದೃಷ್ಟಿಯನ್ನು ಹೊಂದಿದ್ದರು, ಅದು ರಾಷ್ಟ್ರಕ್ಕೆ ಜನಸ್ನೇಹಿ ಆಡಳಿತವನ್ನು ನೀಡುವುದು ರಾಮರಾಜ್ಯದ ಕನಸು ಕಂಡಿದ್ದರು. ದುರದೃಷ್ಟವಶಾತ್ ಸ್ವಾತಂತ್ರ್ಯಾನಂತರ 75 ವರ್ಷಗಳ ನಂತರವೂ ಮಹಾತ್ಮ ಗಾಂಧಿಯವರ ಈ ಕನಸು ಕೇವಲ ಕನಸಾಗಿಯೇ ಉಳಿದಿದೆ ಮತ್ತು ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ. 'ರಾಮರಾಜ್ಯ' ವಾಸ್ತವವಾಗಲು ಸಾಧ್ಯವಿಲ್ಲ ಏಕೆಂದರೆ ನಮ್ಮ ದೇಶದ ನಾಯಕರು ಹಲವಾರು ದುರ್ಗುಣಗಳನ್ನು ಹೊಂದಿದ್ದಾರೆ ಮತ್ತು ಕೆಲವು ಸದ್ಗುಣಗಳನ್ನು ಹೊಂದಿದ್ದಾರೆ. ನಮ್ಮ ಸಮಾಜದಲ್ಲಿ ಮೌಲ್ಯಗಳ ನಾಶ, ಬೆಲೆ ಏರಿಕೆ, ಬರ ಮತ್ತು ಪ್ರವಾಹಗಳು, ಭ್ರಷ್ಟಾಚಾರ, ಕದ್ದಾಲಿಕೆ, ಜನರ ಮನಸ್ಸಿನಲ್ಲಿ ಅತೃಪ್ತಿ ಮತ್ತು ಭ್ರಮನಿರಸನಕ್ಕೆ ಕಾರಣವಾಗಿದೆ.ಇದರಲ್ಲಿ ನಮ್ಮ ವೈಫಲ್ಯಗಳಿಗೆ ಒಂದು ಪ್ರಮುಖ ಕಾರಣ ನಾವು ನಾಗರಿಕರು ಸಕ್ರಿಯವಾಗಿಲ್ಲ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಸರ್ಕಾರದ ವ್ಯವಹಾರಗಳಲ್ಲಿ ನಾಗರಿಕರ ಒಳಗೊಳ್ಳುವಿಕೆ ತರಬಹುದು.

ಸರ್ಕಾರದ ವ್ಯವಹಾರಗಳಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಪರಿಪೂರ್ಣ ಬದಲಾವಣೆಯನ್ನು ತರಬಹುದು. ಏಕೆಂದರೆ ಪ್ರತಿಯೊಬ್ಬರ ಜೀವನದ ಗುಣಮಟ್ಟ ಏನೇ ಇರಲಿ, ಬದುಕುವುದು ಮತ್ತು ಇತರರನ್ನು ಬದುಕಲು ಬಿಡುವುದು ಉದ್ದೇಶವಾಗಿದೆ.

ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಅತ್ಯಂತ ಮಹತ್ವದ್ದಾಗಿದೆ, ಇದು ಭಾರತದ ಬಹುಪಾಲು ನಾಗರಿಕರಲ್ಲಿ ಸಂಪೂರ್ಣವಾಗಿ ಕೊರತೆಯಿದೆ. ಸರ್ಕಾರದ ಕಾರ್ಯಗಳಿಗೆ ಜನರು ಸ್ಪಂದಿಸಬೇಕು. ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ತಿಳಿದಿರುವ ನಾಗರಿಕ

ದೇಶ ವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ

ಮತ್ತು ಅದನ್ನು ತರ್ಕಿಸುವುದು ತನ್ನ ಸಮಾಜಕ್ಕಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುವ ಸ್ಥಿತಿಯಲ್ಲಿದೆ ದುರದೃಷ್ಟವಶಾತ್, ಇದು ನಮ್ಮಿಂದ ಆಗುವುದಿಲ್ಲ ಏಕೆಂದರೆ ನಮ್ಮ ನಾಯಕರಂತೆ ನಾವುಗಳು ತಮ್ಮ ಸಹವರ್ತಿ ನಾಗರಿಕರ ಅಭಿವೃದ್ಧಿಯ ಬದಲು ಸ್ವ-ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೆವೆ. ನಿರ್ದಿಷ್ಟವಾಗಿ ಅಧಿಕಾರಿಗಳ ಮುಂದೆ ಹಲವಾರು ಸವಾಲುಗಳಿವೆ, ಮತ್ತು ಸಾಮಾನ್ಯವಾಗಿ ನಾಗರಿಕರು ಏಕೆಂದರೆ ನಾವೆಲ್ಲರೂ ನೇರವಾಗಿ ಅಥವಾ ಪರೋಕ್ಷವಾಗಿ ರಾಜ್ಯಕ್ಕೆ ಜವಾಬ್ದಾರರಾಗಿರುತ್ತೇವೆ ಇಂದು ದೇಶದಲ್ಲಿ ಚಾಲ್ತಿಯಲ್ಲಿರುವ ವ್ಯವಹಾರಗಳು ಇಂದು ದೇಶದಲ್ಲಿ ಚಾಲ್ತಿಯಲ್ಲಿದೆ. ರಾಮರಾಜ್ಯವನ್ನು ಸಾಧಿಸುವ ಗುರಿಯತ್ತ ನಾವು ನಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

ಮಹಾತ್ಮಾ ಗಾಂಧೀಜಿ ಭಾರತದ ಭವಿಷ್ಯಕ್ಕಾಗಿ ಕಲ್ಪಿಸಿದ 50% ನಷ್ಟು ಸಾಧಿಸಲು ನಾವು ಹೆಜ್ಜೆ ಇಡೋಣ ಆಗಲಾದರೂ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ.

*. ಮಹಾತ್ಮ ಗಾಂಧಿಯವರ ಮಾತೃಭಾಷೆ ಗುಜರಾತಿ.

*. ಅವರು ತಮ್ಮ ಶಾಲಾ ಶಿಕ್ಷಣವನ್ನು ರಾಜ್‌ಕೋಟ್‌ನ ಆಲ್ಫ್ರೆಡ್ ಪ್ರೌಡ ಶಾಲೆಯಿಂದ ಮುಗಿಸಿದರು.

*. ಅವರ ಜನ್ಮದಿನವನ್ನು (2 ನೇ ಅಕ್ಟೋಬರ್) ವಿಶ್ವಾದ್ಯಂತ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.

*. ಅವರು ತನ್ನ ಹೆತ್ತವರ ಕಿರಿಯ ಮಗು. ಅವರಿಗೆ 2 ಸಹೋದರರು ಮತ್ತು 1 ಸಹೋದರಿ ಇದ್ದರು.

*. ಗಾಂಧಿ ಯವರ ತಂದೆ ಧರ್ಮದಿಂದ ಹಿಂದು ಮತ್ತು ಮೋದ್ ಬನಿಯಾ ದವರಾದರೆ ತಾಯಿ ವೈಷ್ಣವ ಧರ್ಮದವರಾಗಿದ್ದರು.

*. ಮಹಾದೇವ ದೇಸಾಯಿ ಕಾರ್ಯದರ್ಶಿಯಾಗಿದ್ದರು.

*. ಗಾಂಧಿಯವರನ್ನು ಹಳೆಯ ಬಿರ್ಲಾ ಹೌಸ್ ನ ತೋಟದಲ್ಲಿ ರಾಷ್ಟ್ರಿಯವಾದಿ ನಾತುರಾಂ ಗೋಡ್ಸೆ ಅವರು ಗುಂಡಿಕ್ಕಿ ಹತ್ಯೆ

ಮಾಡಿದರು.

*. ಗಾಂಧಿಜಿ ಮತ್ತು ಪ್ರಸಿದ್ಧ ಲೇಖಕ ಲಿಯೋ ಟಾಲ್‌ಸ್ಟಾಯ್ ಪತ್ರಗಳ ಮೂಲಕ ಪರಸ್ಪರ ಸಂವಾದ ನಡೆಸಿದರು.

*. ಗಾಂಧಿ ಸತ್ಯಾಗ್ರಹ ಹೋರಾಟದಲ್ಲಿ ತನ್ನ ಸಹೋದ್ಯೋಗಿಗಳಿಗಾಗಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ ನಿಂದ 21ಮೈಲಿ ದೂರದಲ್ಲಿರುವ 1100 ಎಕರೆ ಜಾಗದಲ್ಲಿ ಟಾಲ್‌ಸ್ಟಾಯ್ ಫಾರ್ಮ್ ಅನ್ನು ಸ್ಥಾಪಿಸಿ ಅವರಿಗೆ ವಸತಿ ಅವಕಾಶ ಕಲ್ಪಿಸಿದ್ದರು.

*. 1930 ರಲ್ಲಿ, ಅವರು ದಂಡಿ ಉಪ್ಪಿನ ಮೆರವಣಿಗೆಯನ್ನು ಮುನ್ನಡೆಸಿದರು, ಮತ್ತು 1942 ರಲ್ಲಿ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು.

*. 1930 ರಲ್ಲಿ, ಅವರು ವರ್ಷದ ಟೈಮ್ ನಿಯತಕಾಲಿಕದ ವ್ಯಕ್ತಿ. ಅವರು ಒಬ್ಬ ಮಹಾನ್ ಬರಹಗಾರರಾಗಿದ್ದರು ಮತ್ತು ಮಹಾತ್ಮ ಗಾಂಧಿಯವರ ಸಂಗ್ರಹಿಸಿದ ಕೃತಿಗಳು 50,000 ಪುಟಗಳನ್ನು ಹೊಂದಿವೆ.

*. ಮಹಾತ್ಮ ಗಾಂಧಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ಎಷ್ಟು ಬಾರಿ ನಾಮ ನಿರ್ದೇಶನ ಗೊಂಡಿದ್ದಾರೆ. ಗಾಂಧೀಜಿ ಅವರನ್ನು 1937, 1938, 1939, 1947 ರಲ್ಲಿ ನಾಮನಿರ್ದೇಶನ ಮಾಡಲಾಯಿತು, ಮತ್ತು ಅಂತಿಮವಾಗಿ, ಜನವರಿ 1948 ರಲ್ಲಿ ಅವರನ್ನು ಕೊಲ್ಲುವ ಕೆಲವು ದಿನಗಳ ಮೊದಲು ಸಹ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಗೊಂಡಿದ್ದರು.

*. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶ, ಗ್ರೇಟ್ ಬ್ರಿಟನ್, ಅವರ ಮರಣದ 21 ವರ್ಷಗಳ ನಂತರ ಅವರನ್ನು ಗೌರವಿಸುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು.

*. ಮೋಹನ್ ದಾಸ್ ಕರಮಚಂದ ಗಾಂಧಿ ಮಹಾತ್ಮ ಎಂಬ ಬಿರುದು ನೊಬೆಲ್ ಪ್ರಶಸ್ತಿ ವಿಜೇತ ಬಂಗಾಳಿ ಕವಿ ರವೀಂದ್ರನಾಥ ಟ್ಯಾಗೋರ್ ಅವರು ನೀಡಿದರು.

*. ಮಹಾತ್ಮ ಗಾಂಧಿಯವರ ಶವಯಾತ್ರೆ 8 ಕಿಲೋಮೀಟರ್ ಉದ್ದವಿತ್ತು ಎಂದು ಹೇಳಲಾಗಿದೆ.

*. 1996 ರಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ಗಾಂಧಿ ಸರಣಿಯ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಿತು. 1996 ರಲ್ಲಿ ನೀಡಲಾದ ಸರಣಿಯು 10 ಮತ್ತು 500 ರೂಪಾಯಿ ನೋಟುಗಳದ್ದಾಗಿದೆ.

*. 1959 ರಲ್ಲಿ, ಗಾಂಧಿ ಸ್ಮಾರಕ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. ಇದು ಭಾರತದ ತಮಿಳುನಾಡಿನ ಮಧುರೈ ನಗರದಲ್ಲಿದೆ. ಇದನ್ನು ಗಾಂಧಿ ಮ್ಯೂಸಿಯಂ ಎಂದು ಕರೆಯುತ್ತಾರೆ. ಇದು ಮಹಾತ್ಮಾ ಗಾಂಧಿಯವರು ಧರಿಸಿದ್ದ ರಕ್ತ-ಬಣ್ಣದ ಉಡುಪನ್ನು ಒಳಗೊಂಡಿದೆ.

ಲೇಖಕರು: ✍️ ಸಿದ್ದಲಿಂಗ ಶಿವಯೋಗಿ ಮಠಪತಿ ಉಚ್ಚ ತಾ. ಭಾಲ್ಕಿ ಜಿ. ಬೀದರ್

Show more
0
190
https://avalanches.com/in/bidar__118_1899023_01_10_2021
https://avalanches.com/in/bidar__118_1899023_01_10_2021


*ಲಾಲ್ ಬಹಾದ್ದುರ್ ಶಾಸ್ತ್ರೀ ರವರ 118ನೆಯ ಜನ್ಮ ದಿನಾಚರಣೆ.*


ಬಹಾದುರ್ ಶಾಸ್ತ್ರಿ ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು. ಇವರು ಅಕ್ಟೋಬರ್ 2, 1904 ರಂದು ಉತ್ತರಪ್ರದೇಶದ ಮುಘಲ್ಸರೈ ಎಂಬಲ್ಲಿ ಜನಿಸಿದರು. ಇವರ ತಂದೆ ಶಾರದಪ್ರಸಾದ್ ಶ್ರೀವಾಸ್ತವ ಮತ್ತು ತಾಯಿ ರಾಮದುಲಾರಿ ದೇವಿಯ ಉದರದಲ್ಲಿ ಜನಿಸಿದರು. ಅವರು ಪೂರ್ವ ಮಧ್ಯ ರೈಲ್ವೇ ಇಂಟರ್ ಕಾಲೇಜು ಮತ್ತು ಹರೀಶ್ ಚಂದ್ರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು ಅವರು ವಿಧ್ಯಾಭ್ಯಾಸವನ್ನು ಬಿಟ್ಟು ಅಸಹಕಾರ ಚಳುವಳಿಗೆ ಸೇರಿದರು. ಶಾಸ್ತ್ರಿಯವರ ಚಿಂತನೆಗಳು ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಮತ್ತು ಅನ್ನಿಬೆಸೆಂಟ್ ಅವರ ಬಗ್ಗೆ ಓದುವ ಮೂಲಕ ಪ್ರಭಾವಿತವಾಗಿದ್ದವು. ಪ್ರಮುಖವಾಗಿ ಗಾಂಧಿಯಿಂದ ಪ್ರಭಾವಿತರಾದ ಅವರು 1920ರ ದಶಕದಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಸೇರಿದರು. ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಲಾಲಾ ಲಜಪತ್ ರಾಯ್ ಸ್ಥಾಪಿಸಿದ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದ ಸೇವಕರ ಸೇವಕರು (ಲೋಕ ಸೇವಕ ಮಂಡಲ್). 1947ರಲ್ಲಿ ಸ್ವಾತಂತ್ರ್ಯದ ನಂತರ, ಅವರು ಭಾರತ ಸರ್ಕಾರವನ್ನು ಸೇರಿಕೊಂಡರು ಮತ್ತು ಪ್ರಧಾನ ಮಂತ್ರಿ ನೆಹರು ಅವರ ಪ್ರಮುಖ ಕ್ಯಾಬಿನೆಟ್ ಸಹೋದ್ಯೋಗಿಗಳಲ್ಲಿ ಒಬ್ಬರಾದರು, ಮೊದಲು ರೈಲ್ವೇ ಮಂತ್ರಿಯಾಗಿ(1951-56), ಮತ್ತು ನಂತರ ಗೃಹ ಮಂತ್ರಿ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರು.

1965ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ದೇಶವನ್ನು ಮುನ್ನಡೆಸಿದರು. ಅವರ ಘೋಷಣೆ " ಜೈ ಜವಾನ್, ಜೈ ಕಿಸಾನ್ " " ("ಸೈನಿಕನಿಗೆ ನಮಸ್ಕಾರ; ರೈತನಿಗೆ ನಮಸ್ಕಾರ") ಯುದ್ಧದ ಸಮಯದಲ್ಲಿ ಬಹಳ ಜನಪ್ರಿಯವಾಯಿತು.

ಭಾರತದ ಎರಡನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಒಬ್ಬ ಭಾರತೀಯ ರಾಜಕಾರಣಿ. ಅವರು ಬಿಳಿ ಕ್ರಾಂತಿಯನ್ನು (white Revolution) ಉತ್ತೇಜಿಸಿದರು. ಹಾಲಿನ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವ ರಾಷ್ಟ್ರೀಯ ಅಭಿಯಾನ ಗುಜರಾತ್‌ನ ಆನಂದ್‌ ನ ಅಮುಲ್ ಹಾಲು ಸಹಕಾರವನ್ನು ಬೆಂಬಲಿಸುವ ಮೂಲಕ ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ರಚಿಸಿದರು.1965ರಲ್ಲಿ ಭಾರತದ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳಿದ ಶಾಸ್ತ್ರಿ , ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉತ್ತೇಜಿಸಿದರು. ಇದು ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು.

ಯುದ್ಧವು ಔಪಚಾರಿಕವಾಗಿ ತಾಷ್ಕೆಂಟ್ ಒಪ್ಪಂದದೊಂದಿಗೆ 10 ಜನವರಿ 1966 ರಂದು ಕೊನೆಗೊಂಡಿತು ; ಅವರು ಮಾರನೆಯ ದಿನ, ತಾಷ್ಕೆಂಟ್‌ನಲ್ಲಿಯೇ ತೀರಿಕೊಂಡರು, ಅವರ ಸಾವಿಗೆ ಕಾರಣವಿತ್ತು; ಇದು ಹೃದಯ ಸ್ತಂಭನ (ಹಾರ್ಟ್ ಅಟ್ಟ್ಯಾಕ್) ಎಂದು ವರದಿಯಾಗಿದೆ, ಆದರೆ ಅವರ ಕುಟುಂಬವು ಈ ಕಾರಣದಿಂದ ತೃಪ್ತಿ ಹೊಂದಿಲ್ಲ. ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು.

*ಭಾರತದ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರೀಯವರದ್ದು ಮೇರು ವ್ಯಕ್ತಿತ್ವ.*

ಎರಡು ದಶಕಗಳ ನೆಹರೂ ಆಡಳಿತ ಕೊನೆಗೊಂಡಾಗ ಭಾರತವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ದೇಶದ ಜನರಿಗೆ ಬೇಕಾಗಿದ್ದದ್ದು ಒಬ್ಬ ದಕ್ಷ ಮತ್ತು ಸಜ್ಜನ ರಾಜಕಾರಣಿ. ದೇಶದ ಆರ್ಥಿಕತೆಗೆ ಶಕ್ತಿ ತುಂಬಬಲ್ಲ ಪ್ರಾಮಾಣಿಕ ವ್ಯಕ್ತಿ. ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕ. ಭಾರತದ ಜನ ಲಾಲ್‌ ಬಹದ್ದೂರ್‌ ಶಾಸ್ತ್ರೀಯವರಲ್ಲಿ ಈ ಎಲ್ಲಾ ಗುಣಗಳನ್ನು ಕಂಡಿದ್ದರು. ಹಾಗಾಗಿ ದೇಶ ಶಾಸ್ತ್ರೀಜಿಯವರನ್ನು ಪ್ರಧಾನಿ ಸ್ಥಾನಕ್ಕೆ ಬಯಸಿತ್ತು. ಕಾಂಗ್ರೆಸ್ಸಿಗರಿಗೂ ನೆಹರೂರವರ ಸಾಮರ್ಥ್ಯಕ್ಕೆ ಸರಿಸಾಟಿಯಾಗಬಲ್ಲ ನಾಯಕರಾಗಿ ಕಂಡದ್ದು ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರು. ಶಾಸ್ತ್ರೀಜಿ ದೇಶದ ಚುಕ್ಕಾಣಿ ಹಿಡಿದರು. ಹಾಗೆ ನೋಡಿದರೆ ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರೀ. ಬಡತನ ಅವರಿಗೆ ಸಹನೆ, ತಾಳ್ಮೆ ಮತ್ತು ವಿನಯವನ್ನು ಕಲಿಸಿತ್ತು.

ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು. ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.

ಆಗಿನ ಕಾಲದಲ್ಲಿ ದೊಡ್ಡ ಸಾಮಾಜಿಕ ಪಿಡುಗಾಗಿದ್ದ ವರದಕ್ಷಿಣೆಯನ್ನು ಕಟುವಾಗಿ ವಿರೋಧಿಸಿದ್ದರು. ತಮ್ಮ ಮದುವೆಯಲ್ಲಿ ಪತ್ನಿಯ ಮನೆಯಿಂದ ಏನನ್ನೂ ಸ್ವೀಕರಿಸಲು ಇಷ್ಟಪಟ್ಟಿರಲಿಲ್ಲ. ಶಾಸ್ತ್ರಿ ಅವರ ಮಾವನವರು ಹಲವು ಬಾರಿ ಮನವಿ ಮಾಡಿದ ಮೇಲೆ ಕೆಲವು ಮೀಟರ್‌ ಖಾದಿ ಬಟ್ಟೆಯನ್ನು ಮದುವೆಯ ಉಡುಗೊರೆಯಾಗಿ ಪಡೆದಿದ್ದರು.

ಸ್ವಾತಂತ್ರ್ಯ ಸಿಕ್ಕಿದ ಮೇಲೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಗೋವಿಂದ ವಲ್ಲಭ ಪಂತ್‌ ಅವರ ಆಡಳಿತದಲ್ಲಿ ಶಾಸ್ತ್ರಿ ಅವರು ಪೊಲೀಸ್‌ ಮತ್ತು ಸಾರಿಗೆ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ಬಹುದೊಡ್ಡ ಬದಲಾವಣೆ ತಂದರು. ಮೊದಲ ಬಾರಿಗೆ ಹೆಣ್ಣುಮಕ್ಕಳನ್ನು ಬಸ್‌ ನಿರ್ವಾಹಕರಾಗಿ ನೇಮಕ ಮಾಡಿದರು.

* ಪ್ರಧಾನಿಯಾಗಿದ್ದಾಗಲೂ ಶಾಸ್ತ್ರಿ ಅವರ ಬಳಿ ಓಡಾಡಲು ಸ್ವಂತ ಕಾರು ಇರಲಿಲ್ಲ. ಮನೆಯ ಸದಸ್ಯರ ಒತ್ತಾಯ ಹೆಚ್ಚಾದಾಗ, ಫಿಯೆಟ್‌ ಕಾರೊಂದನ್ನು ಖರೀದಿಸಲು ನಿರ್ಧರಿಸಿದರು. ಆದರೆ, ಅದರ ಬೆಲೆ ₹12 ಸಾವಿರ ಇತ್ತು. ಶಾಸ್ತ್ರಿ ಅವರ ಬಳಿ ₹5 ಸಾವಿರ ಕಡಿಮೆಯಿತ್ತು. ಇದಕ್ಕಾಗಿ ಅವರು ಬ್ಯಾಂಕ್‌ ಒಂದಕ್ಕೆ ವಾಹನ ಸಾಲದ ಅರ್ಜಿ ಗುಜರಾಯಿಸಿದರು. ತಕ್ಷಣ ಸಾಲವೇನೂ ಸಿಕ್ಕಿತು. ಆದರೆ, ಬ್ಯಾಂಕ್‌ ಅಧಿಕಾರಿಯನ್ನು ಕರೆದು ಇಷ್ಟೇ ಕ್ಷಿಪ್ರವಾಗಿ ಎಲ್ಲ ಗ್ರಾಹಕರಿಗೂ ಸಾಲ ಸೌಲಭ್ಯ ಸಿಗುತ್ತಿದೆಯೇ? ಎಂದು ವಿಚಾರಿಸಿಕೊಂಡಿದ್ದರು.

ಇಂತಹ ವ್ಯಕ್ತಿತ್ವದ ಶ್ರೇಷ್ಠ ರಾಜಕೀಯ ಮುತ್ಸದ್ಧಿ ಈ ದೇಶಕಂಡ ಅಪ್ರತಿಮ ನಾಯಕ. ಇಂತಹ ನಾಯಕರನ್ನು ಪಡೆದ ನಾವೇ ಧನ್ಯರು.

ಲೇಖಕರು ✍️: ಸಿದ್ದಲಿಂಗ ಶಿವಯೋಗಿ ಮಠಪತಿ ಉಚ್ಛಾ ತಾ. ಭಾಲ್ಕಿ ಜಿ. ಬೀದರ

Show more
0
98
https://avalanches.com/in/bidar__114_1898612_27_09_2021
https://avalanches.com/in/bidar__114_1898612_27_09_2021

ಶಹೀದ್ ಭಗತ್ ಸಿಂಗ್ ಅವರ 114 ನೇ ಜನ್ಮ ದಿನಾಚರಣೆ:

ಭಗತ ಸಿಂಗರು ಸೆಪ್ಟೆಂಬರ್ 28 1907 ರಲ್ಲಿ ಭಾರತದ ಪಂಜಾಬನ (ಈಗಿನ ಪಾಕಿಸ್ತಾನದ) ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಶ್ರೀಮತಿ ವಿದ್ಯಾವತಿ ಮತ್ತು ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ ಕಿಶನ್ ಸಿಂಗ್. ಭಗತ್ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್.

ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ಜೊತೆಗೆ ಹಲವಾರು ಚಳುವಳಿಗಳನ್ನು ಸಂಘಟಿಸಿದರು. ಬ್ರಿಟೀಷರು ಅವರನ್ನು ಬಂಧಿಸಲು ಬಲೆ ಬೀಸಿದರೂ ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದ ರಕ್ತದ ಕೆಂಪು ಕಲೆ ಕಣ್ಣಾರೆ ಕಂಡ ಭಗತ್ ಸಿಂಗ್ ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು. ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು.

ಇವೆಲ್ಲವೂಗಳಿಂದ ಪ್ರೇರೇಪಿತರಾದ

ಭಗತ್ ಸಿಂಗ್ ರವರು ಒಬ್ಬ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಾಜವಾದಿ ಕ್ರಾಂತಿಕಾರಿಯಾಗಲು ಕಾರಣವಾಯಿತು. ಶಹೀದ್-ಎ-ಅಜಮ್ ಭಗತ್ ಸಿಂಗ್ ಎಂದೇ ಜನಪ್ರಿಯರಾಗಿದ್ದ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟು ಭಾರತೀಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.


ಭಗತ್ ಸಿಂಗರ ಬಗ್ಗೆ ಕಿರು ಪರಿಚಯ .

1. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಭಗತ್ ಸಿಂಗ್ ತುಂಬಾ ವಿಚಲಿತರಾದರು, ಅವರು ರಕ್ತಪಾತದ ಸ್ಥಳಕ್ಕೆ ಭೇಟಿ ನೀಡಲು ಶಾಲೆಗೆ ಬಂಕ್ ಮಾಡಿದರು. ಕಾಲೇಜಿನಲ್ಲಿ, ಅವರು ಶ್ರೇಷ್ಠ ನಟರಾಗಿದ್ದರು ಮತ್ತು 'ರಾಣಾ ಪ್ರತಾಪ' ಮತ್ತು 'ಭಾರತ-ದುರದಶಾ' ಮುಂತಾದ ನಾಟಕಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದರು.


2. ಭಗತ್ ಸಿಂಗ್ ಬಾಲ್ಯದಲ್ಲಿ ಯಾವಾಗಲೂ ಬಂದೂಕಿನ ಬಗ್ಗೆ ಮಾತನಾಡುತ್ತಿದ್ದರು. ಅವರು ಬ್ರಿಟೀಷರೊಂದಿಗೆ ಹೋರಾಡಬಲ್ಲದನ್ನು ಬಳಸಿ ಗದ್ದೆಗಳನ್ನು ಬೆಳೆಯಲು ಬಯಸಿದ್ದರು. ಅವರು 8 ವರ್ಷದವರಾಗಿದ್ದಾಗ, ಆಟಿಕೆಗಳು ಅಥವಾ ಆಟಗಳ ಬಗ್ಗೆ ಮಾತನಾಡುವ ಬದಲು ಅವನು ಯಾವಾಗಲೂ ಬ್ರಿಟಿಷರನ್ನು ಭಾರತದಿಂದ ಓಡಿಸುವ ಬಗ್ಗೆ

ಮಾತನಾಡುತ್ತಿದ್ದರು.

3. ಭಗತ್ ಸಿಂಗ್ ಮದುವೆಯಾಗಬೇಕೆಂದು ಆತನ ಪೋಷಕರು ಬಯಸಿದಾಗ, ಅವರು ಕಾನ್ಪುರಕ್ಕೆ ಓಡಿಹೋದರು. ಅವನು ತನ್ನ ಹೆತ್ತವರಿಗೆ "ನಾನು ಬ್ರಿಟಿಷ್ ರಾಜ್ ಇರುವ ವಸಾಹತು ಭಾರತದಲ್ಲಿ ಮದುವೆಯಾದರೆ, ನನ್ನ ವಧು ನನ್ನ ಸಾವು ಆಗುತ್ತದೆ. ಆದ್ದರಿಂದ, ನನಗೆ ಈಗ ವಿಶ್ರಾಂತಿ ಅಥವಾ ಲೌಕಿಕ ಬಯಕೆ ಇಲ್ಲ" ಎಂದು ಹೇಳಿದನು. "ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್" ಗೆ ಸೇರಿದರು.

4.ಅವರು ಚಿಕ್ಕ ವಯಸ್ಸಿನಲ್ಲೇ ಲೆನಿನ್ ನೇತೃತ್ವದ ಸಮಾಜವಾದ ಮತ್ತು ಸಮಾಜವಾದಿ ಕ್ರಾಂತಿಗಳತ್ತ ಆಕರ್ಷಿತರಾದರು ಮತ್ತು ಅವರ ಬಗ್ಗೆ ಓದಲು ಆರಂಭಿಸಿದರು. ಭಗತ್ ಸಿಂಗ್ ಹೇಳಿದರು 'ಅವರು ನನ್ನನ್ನು ಕೊಲ್ಲಬಹುದು, ಆದರೆ ನನ್ನ ಕಲ್ಪನೆಗಳಲ್ಲ. ಅವರು ನನ್ನ ದೇಹವನ್ನು ತುಳಿಯಬಹುದು, ಆದರೆ ನನ್ನ ಚೈತನ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ.


5. ಭಗತ್ ಸಿಂಗ್ ಬ್ರಿಟಿಷರಿಗೆ "ಗಲ್ಲಿಗೇರಿಸುವ ಬದಲು ಆತನನ್ನು ಗುಂಡಿಕ್ಕಿ ಕೊಲ್ಲಬೇಕು" ಎಂದು ಹೇಳಿದ್ದರು ಆದರೆ ಬ್ರಿಟಿಷರು ಅದನ್ನು ಪರಿಗಣಿಸಲಿಲ್ಲ. ಅವರು ಇದನ್ನು ತಮ್ಮ ಕೊನೆಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಭಗತ್ ಸಿಂಗ್ ಈ ಪತ್ರದಲ್ಲಿ ಹೀಗೆ ಬರೆದಿದ್ದಾರೆ, "ಯುದ್ಧದ ಸಮಯದಲ್ಲಿ ನನ್ನನ್ನು ಬಂಧಿಸಲಾಯಿತು. ಆದ್ದರಿಂದ, ನನಗೆ ಶಿಕ್ಷೆಯಾಗಲು ಸಾಧ್ಯವಿಲ್ಲ.


6.ಸಹವರ್ತಿಗಳೊಂದಿಗೆ, ಭಗತ್ ಸಿಂಗ್ ಅವರು ಕೇಂದ್ರ ಶಾಸಕಾಂಗ ಸಭೆಯಲ್ಲಿ ಬಾಂಬ್‌ಗಳನ್ನು ಎಸೆದರು. ಅವರು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಬಾಂಬ್‌ಗಳನ್ನು ಕಡಿಮೆ ದರ್ಜೆಯ ಸ್ಫೋಟಕಗಳಿಂದ ಮಾಡಲಾಗಿತ್ತು.


7. ಅವರು ಜೈಲಿನಲ್ಲಿರುವಾಗ ಉಪವಾಸ ಸತ್ಯಾಗ್ರಹ ಮಾಡಿದರು. ಈ ಸಮಯದಲ್ಲಿ ಅವರು ಹಾಡುವುದು, ಬರೆಯುವುದು, ಪುಸ್ತಕಗಳನ್ನು ಓದುವುದು, ಪ್ರತಿದಿನ ನ್ಯಾಯಾಲಯಕ್ಕೆ ಭೇಟಿ ನೀಡುವುದು ಮುಂತಾದ ತನ್ನ ಎಲ್ಲಾ ಕೆಲಸಗಳನ್ನು ನಿಯಮಿತವಾಗಿ ಮಾಡುತ್ತಿದ್ದರು


8. ಭಗತ್ ಸಿಂಗ್ ಅವರು 'ಇಂಕ್ವಿಲಾಬ್ ಜಿಂದಾಬಾದ್' ಎಂಬ ಪ್ರಬಲ ಘೋಷಣೆಯನ್ನು ರೂಪಿಸಿದರು, ಇದು ಭಾರತದ ಸಶಸ್ತ್ರ ಹೋರಾಟದ ಘೋಷಣೆಯಾಯಿತು.

9.ಮಾರ್ಚ್ 23, 1931 ರಂದು ಅಧಿಕೃತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಅವರನ್ನು ಗಲ್ಲಿಗೇರಿಸಲಾಯಿತು. ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಿದಾಗ ಅವರು ನಗುತ್ತಿದ್ದರು ಎಂದು ಹೇಳಲಾಗಿದೆ. ವಾಸ್ತವವಾಗಿ, ಇದನ್ನು "ಕೆಳಮಟ್ಟದ ಬ್ರಿಟಿಷ್ ಸಾಮ್ರಾಜ್ಯಶಾಹಿ" ಗೆ ನಿರ್ಭೀತಿಯಿಂದ ಮಾಡಲಾಯಿತು.


10. ಆತನ ತಾಯಿ ಜೈಲಿನಲ್ಲಿ ಅವರನ್ನು ಭೇಟಿ ಮಾಡಲು ಬಂದಾಗ, ಭಗತ್ ಸಿಂಗ್ ಜೋರಾಗಿ ನಗುತ್ತಿದ್ದ. ಇದನ್ನು ನೋಡಿದ ಜೈಲು ಅಧಿಕಾರಿಗಳು ಸಾವಿಗೆ ಹತ್ತಿರವಾಗಿದ್ದರೂ ಬಹಿರಂಗವಾಗಿ ನಗುತ್ತಿರುವ ಈ ವ್ಯಕ್ತಿ ಹೇಗಿದ್ದಾರೆ ಎಂದು ನೋಡಿ ಗಾಬರಿಯಾದರು.

ಅವರ ವ್ಯಕ್ತಿತ್ವ ಅನೇಕರ ಹೃದಯದಲ್ಲಿ ಅಚ್ಚಳಿಯದೆ ಇನ್ನೂ 100 ವರ್ಷ ಕಳೆದರೂ ಇರುತ್ತದೆ.


ಲೇಖಕರು: ಸಿದ್ದಲಿಂಗ ಶಿವಯೋಗಿ ಮಠಪತಿ ಉಚ್ಚಾ ತಾ. ಭಾಲ್ಕಿ

Show more
0
76
https://avalanches.com/in/bidar__1898606_27_09_2021
https://avalanches.com/in/bidar__1898606_27_09_2021


*ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್.

ಭಗತ್ ಸಿಂಗ್ ಅವರನ್ನು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅತ್ಯಂತ ಶಕ್ತಿಶಾಲಿ ಕ್ರಾಂತಿಕಾರಿ ಎಂದು ಪರಿಗಣಿಸಲಾಗಿದೆ. ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ಜನರನ್ನು ಪ್ರೇರೇಪಿಸಿದರು.

ಆತ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರ. ದೇಶಭಕ್ತಿಯ ಭಾವನೆಗಳು ಕೇವಲ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಮಾತ್ರವಲ್ಲದೆ ಭಾರತದ ಕೋಮುವಾದದ ವಿಭಜನೆಯ ಮೇಲೂ ನಿರ್ಬಂಧಿತವಾಗಿತ್ತು. ಅವರು ಪ್ರತಿಭಾವಂತ, ಪ್ರಬುದ್ಧ ಮತ್ತು ಯಾವಾಗಲೂ ಸಮಾಜವಾದದತ್ತ ಆಕರ್ಷಿತರಾಗಿದ್ದರು.

ಅವರು ಅರಾಜಕತಾವಾದಿ ಮತ್ತು ಮಾರ್ಕ್ಸ್ ವಾದಿ ಸಿದ್ಧಾಂತಗಳತ್ತ ಆಕರ್ಷಿತರಾದರು, ಇದು ಅವರ ಮನಸ್ಸಿನಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ಮತ್ತಷ್ಟು ಹುಟ್ಟುವಂತೆ ಮಾಡಿತು. ಅವರು ಅಸಾಮಾನ್ಯ ವಿದ್ಯಾರ್ಥಿಯಾಗಿದ್ದರು, ಉತ್ತಮ ಓದುಗರಾಗಿದ್ದರು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಯಾವಾಗಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಅವರು ಸೆಪ್ಟೆಂಬರ್ 28, 1907 ರಂದು ಭಾರತದ ಪಂಜಾಬ್‌ನಲ್ಲಿ (ಈಗ ಪಾಕಿಸ್ತಾನ) ಸಿಖ್ ಕುಟುಂಬದಲ್ಲಿ ಜನಿಸಿದ ಭಗತ್ ಸಿಂಗ್ ಒಬ್ಬ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಾಜವಾದಿ ಕ್ರಾಂತಿಕಾರಿ. ಶಹೀದ್-ಎ-ಅಜಮ್ ಭಗತ್ ಸಿಂಗ್ ಎಂದೇ ಜನಪ್ರಿಯರಾಗಿದ್ದ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟು ಭಾರತೀಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.

ಭಗತಸಿಂಗರು ಪಂಜಾಬ್ ನ (ಈಗಿನ ಪಾಕಿಸ್ತಾನದ) ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಿಸಿದರು . ಅವರ ತಾಯಿ ಶ್ರೀಮತಿ ವಿದ್ಯಾವತಿ ಮತ್ತು ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ ಕಿಶನ್ ಸಿಂಗ್. ಭಗತ್ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್. ಅಜಿತ್ ಸಿಂಗರು ಒಬ್ಬ ಉಗ್ರ ಭಾಷಣಕಾರರಾಗಿದ್ದು ರೈತರ ಜೊತೆ ಹಲವಾರು ಚಳುವಳಿಗಳನ್ನು ಸಂಘಟಿಸಿದರು. ಬ್ರಿಟೀಷರು ಅವರನ್ನು ಬಂಧಿಸಲು ಎಷ್ಟೇ ಬಲೆ ಬೀಸಿದರೂ ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು.

ಅವರು ಹಲವಾರು ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಭಾಗವಹಿಸಿದ್ದರು ಮತ್ತು ದೇಶದಲ್ಲಿ ದೇಶಭಕ್ತಿಯ ಉದಾಹರಣೆ ನೀಡಿದರು.

"ಸಾಮಾನ್ಯ ಎತ್ತರ, ತೆಳುವಾದ ದೇಹ, ಉದ್ದನೆಯ ಮುಖ, ಸುಂದರ ಮೈಬಣ್ಣ, ನೀಳ ಮೂಗು; ಹೊಳೆಯುವ ಕಣ್ಣುಗಳು; ಸಣ್ಣ ಗಡ್ಡ ಮತ್ತು ಮೀಸೆ; ಖದ್ದರ್ ಧರಿಸುತ್ತಾರೆ. " ಕ್ರಿಮಿನಲ್ ಇಂಟೆಲಿಜೆನ್ಸ್ ಡಿಪಾರ್ಟ್ಮೆಂಟ್ (ಸಿಐಡಿ) 1926 ರಲ್ಲಿ ಭಗತ್ ಸಿಂಗ್ ಅನ್ನು ತನ್ನ ವರದಿಯಲ್ಲಿ ವಿವರಿಸಿದೆ. ಕಾರ್ಯನಿರತ ಹದಿಹರೆಯದವರು ಹಲವಾರು ಕಾರಣಗಳಿಗಾಗಿ ಸಿಐಡಿಯ ರೇಡಾರ್ ನಲ್ಲಿದ್ದರು: ಅವರು 1924 ರಲ್ಲಿ ಜೈಟೋ ಮೋರ್ಚಾ ಕಾರ್ಯಕರ್ತರಿಗೆ ಆಹಾರವನ್ನು ಪೂರೈಸಿದರು, ಇದಕ್ಕಾಗಿ ಅವರನ್ನು ಕ್ರಿಮಿನಲ್ ಅಡಿಯಲ್ಲಿ ದಾಖಲಿಸಲಾಯಿತು ಕಾನೂನು ತಿದ್ದುಪಡಿ ಕಾಯ್ದೆ; ಅವರು ಜಮೀಂದರ್ ಸಭಾ ನೇತೃತ್ವದಲ್ಲಿ ನಡೆದ ಆಂದೋಲನದಲ್ಲಿ ಭಾಗವಹಿಸಿದ್ದರು.

ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು.

"ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ ಸ್ವಾತಂತ್ರ್ಯ. ಅದೊಂದೇ ನನ್ನ ಕನಸು" ಎಂಬ ಸರಭರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಕಿಡಿ ಹಚ್ಚಿದ್ದವು. ಇದು ಭಗತ್‌ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವಂತಹ ಗುಣವನ್ನು ಮೈಗೂಡುವಂತೆ ಮಾಡಿತ್ತು.


ವಿದ್ಯಾರ್ಥಿ ಜೀವನದಲ್ಲಿ ಅವರು ೧೯೨೧ ರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಭಾವನೆಗಳನ್ನು ಪ್ರಚೋದಿಸುತ್ತಿದ್ದರಿಂದ ಬ್ರಿಟೀಷರು ನಿಷೇಧಿಸಿದ್ದ ರಾಷ್ಟ್ರೀಯ ನಾಟಕ ಕೂಟದ ಸಕ್ರಿಯ ಕಾರ್ಯಕರ್ತನಾಗಿದ್ದು ತಾನೂ ಸಹ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಮನೆಯಲ್ಲಿ ಮದುವೆ ಒತ್ತಾಯ ಹೆಚ್ಚಾದಾಗ ಮನೆ ಬಿಟ್ಟು ವಿಧ್ಯಾಭ್ಯಾಸ ತೊರೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು 1924 ರಲ್ಲಿ ಕಾನ್ಪುರಕ್ಕೆ ತೆರೆಳಿದರು.

ಕಾನ್ಪುರದಲ್ಲಿ ಚಂದ್ರಶೇಖರ್ ಆಜಾದ್, ಬಿ.ಕೆ. ದತ್, ಜೆ.ಸಿ.ಚಟರ್ಜಿ, ಬಿಜೊಯ್ ಕುಮಾರ್ ಸಿನ್ಹಾ ರಂಥಹ ಕಾರ್ಯಕಾರಿಗಳ ಸಂಪರ್ಕ ಪಡೆದರು. ಈ ಸಮ್ಮಿಲನ ಗಾಳಿ ಮತ್ತು ಬೆಂಕಿ ಒಂದೂಗೂಡಿದಂತಾಗಿ ಸಮರಶೀಲ ಹೋರಾಟ ನಡೆಸಲು ಭದ್ರವಾದ ಬುನಾದಿ ಹಾಕಿದವು. ಆ ಸಂದರ್ಭದಲ್ಲಿ ಕ್ರಾಂತಿಕಾರಿ ಸಂಘಟನೆಯೆಂಬ ಹೆಗ್ಗಳಿಕೆಯಿಂದ ಕೆಲಸ ಮಾಡುತ್ತಿದ್ದ ಹಿಂದೂಸ್ತಾನ್ ಗಣತಂತ್ರವಾದಿ ಸಂಘಟನೆಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದರು.

ವಸಾಹತುಶಾಹಿ ಪ್ರಭುತ್ವವನ್ನು ಶಸ್ತ್ರಸಜ್ಜಿತ ಕ್ರಾಂತಿಯ ಮೂಲಕ ಕಿತ್ತೊಗೆಯಲು ಸಚಿಂದ್ರ ನಾಥ ಸನ್ಯಾಲ್, ಜೋಗೇಶ್ ಚಂದ್ರ ಚಟರ್ಜಿ ಮತ್ತು ರಾಮಪ್ರಸಾದ್ ಬಿಸ್ಮಿಲ್ಲಾರವರ ನಾಯಕತ್ವದಡಿ 1924 ರ ಅಕ್ಟೋಬರ್ ನಲ್ಲಿ ಹಿಂದೂಸ್ತಾನ್ ಗಣತಂತ್ರ ಸಂಘಟನೆಯನ್ನು ಸ್ಥಾಪಿಸಲಾಗಿತ್ತು.

ಕಾರ್ಯಾಚರಣೆಯ ದಿನ ತಾವು ನಿಲ್ಲಬೇಕಾದ ಆಯಕಟ್ಟಿನ ಜಾಗವನ್ನು ಇಬ್ಬರೂ ಕ್ರಾಂತಿಕಾರಿಗಳು ನೋಡಿಕೊಂಡರು.

ಭಗತ್ ನನ್ನು ತಾನಿನ್ನೆಂದೂ ನೋಡಲಾರೆನೇನೋ ಎಂಬ ಭಾರವಾದ ಹೃದಯದಿಂದ ಚಂದ್ರಶೇಖರ್ ಆಜಾದ್ ರು ಇವರನ್ನು ಬೀಳ್ಕೊಟ್ಟರು. ಈವೆರಡೂ ಕಾಯಿದೆಗಳು ಅಂಗೀಕಾರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲವಾದ್ದರಿಂದ ಚರ್ಚೆಯ ನಡುವೆ ಭಗತ್ & ಬಿ.ಕೆ. ದತ್ ಎದ್ದುನಿಂತು ಬಾಂಬೊಂದನ್ನು ಸಭೆಯತ್ತ ಎಸೆದರು. 'ಇಂಕ್ವಿಲಾಬ್-ಜಿಂದಾಬಾದ್', 'ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ' ಎಂಬ ಘೋಷಣೆಗಳನ್ನು ಕೂಗುತ್ತಾ ಕರಪತ್ರ ತೂರಿದರು.

ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿದ್ದರೂ ಅದಕ್ಕಾಗಿ ಯಾವುದೇ ಪ್ರಯತ್ನ ಮಾಡದೆ ಇಬ್ಬರೂ ಮಂಜುಗಡ್ಡೆಯಂತೆ ದಸ್ತಗಿರಿಯಾಗಲು ನಿಂತಾಗ ಕೆಲವು ಸಮಯದ ನಂತರವಷ್ಟೇ ಪೋಲೀಸರು ಎಚ್ಚೆತ್ತು ಅವರನ್ನು ಬಂಧಿಸಲು ಸಿದ್ಧರಾದರು. ನ್ಯಾಯಾಲಯವನ್ನು ಪ್ರಚಾರ ಮಾಧ್ಯಮವನ್ನಾಗಿ ಭಗತ್ ಸಂಪೂರ್ಣವಾಗಿ ಬಳಸಿಕೊಂಡು ಕಿವುಡಾಗಿದ್ದ ಬ್ರಿಟೀಷ್ ಪ್ರಭುತ್ವ ಕಿವಿ ನಿಮಿರುವಂತೆ ಮಾಡುವದಷ್ಟೆ ಅವರ ಮತ್ತು ಸಂಘಟನೆಯ ಮುಖ್ಯ ಧ್ಯೇಯವಾಗಿತ್ತು.

ಅಸೆಂಬ್ಲಿಯಲ್ಲಿ ಬಾಂಬು ದಾಳಿಯಾದ ತಕ್ಷಣವೆ ಪ್ರಗತಿಪರ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಕಾಂಗ್ರೆಸ್ ಸದಸ್ಯ ಚಮನ್ಲಾಲ್ ಇದನ್ನು ಖಂಡಿಸಿ ಬಾಂಬ್ ಎಸೆಯುವುದು ಹುಚ್ಚುತನ ಎಂದದಕ್ಕೆ, ಮೊದಲ ಭೇಟಿಯಲ್ಲಿಯೇ ಭಗತ ಸಿಂಗ ರವರನ್ನು ತನ್ನ ಲಾಯರಾಗಿದ್ದ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ತರುಣ್ ಅಸಫ್ ಆಲಿಗೆ ಹೇಳಿದ್ದು: 'ನಾವು ಹುಚ್ಚರಲ್ಲ ಎಂಬುದನ್ನು ದಯಮಾಡಿ ಚಮನ್ಲಾಲ್ಗೆ ಮನದಟ್ಟು ಮಾಡಿ. ನಾವು ಸ್ಥಿತಿಗತಿಗಳ, ಆಶೋತ್ತರಗಳ ಗಂಭೀರ ವಿದ್ಯಾರ್ಥಿಗಳು ಎಂಬುದನ್ನು ವಿನಮ್ರವಾಗಿ ತಿಳಿಸುತ್ತೇವೆ'.

ಭಗತ್ ಸಿಂಗರು ಅಪರಾಧಕ್ಕೆ ಶಿಕ್ಷೆ ವಿಧಿಸಿದ ನಂತರ ಅವರನ್ನು ಕೆಲಕಾಲ ಮಿಯಾನ್ವಾಲಿ ಜೈಲಿನಲ್ಲಿಟ್ಟಿದ್ದು ನಂತರ ಲಾಹೋರ್ ಸೆಂಟ್ರಲ್ ಜೈಲಿಗೆ ರವಾನಿಸಲಾಯಿತು. ಸ್ಯಾಂಡರ್ಸ ಹತ್ಯೆ, ಲಾಹೋರ್ ಪಿತೂರಿ ಮೊಕದ್ದಮೆ ಹೀಗೆ ಹಲವು ಅಪರಾದಗಳ ಸರಣಿ ಪಟ್ಟಿಯನ್ನು ಅವರ ಸುತ್ತಲೂ ಬ್ರಿಟೀಷರು ಹೆಣೆಯಲಾರಂಭಿಸಿದರು.

ರಾಜಕೀಯ ಬಂಧಿಗಳಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ಕಿರುಕುಳವನ್ನು ಪ್ರತ್ಯಕ್ಷ ಕಂಡ ಭಗತ್ ಸಿಂಗ್ , ಉತ್ತಮ ಸೌಲಭ್ಯಗಳಿಗಾಗಿ ಉಪವಾಸ ಸತ್ಯಾಗ್ರಹ ಮಾಡಿ ಬಂಧಿಗಳಿಗೆ ಸ್ವಲ್ಪ ಮಟ್ಟಿಗೆ ಉತ್ತಮ ಆಹಾರ ಮತ್ತು ಓದಲು ಬೇಕಾದ ಸೌಲಭ್ಯ ಒದಗಿಸುವಲ್ಲಿ ಸತ್ಯಾಗ್ರಹವು ಯಶಸ್ವಿಯಾಯಿತು. ಚಂದ್ರಶೇಖರ ಅಜಾದ್ ನಾಯಕತ್ವದಲ್ಲಿ ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯು ಭಗತ್ರನ್ನು ಜೈಲಿನಿಂದ ಅಪಹರಿಸಿ ಬಿಡಿಸಿಕೊಂಡು ಬರಲು ಯೋಜಿಸಿದ ಯಾವ ತಂತ್ರಗಳೂ ಫಲಿಸದೆ ಕಾರ್ಯಕರ್ತರು ಕಂಗೆಟ್ಟರು.

ಜೈಲಿನಲ್ಲಿ ಬಂಧಿಯಾಗಿದ್ದ ದಿನಗಳಲ್ಲಿ ಹಲವು ಪುಸ್ತಕಗಳನ್ನು ತರುವಂತೆ ಸಹಚರರಲ್ಲಿ ದುಂಬಾಲು ಬೀಳುತ್ತಿದ್ದರು. ಅವರು ಓದಿ ಮುಗಿಸಿದ ಕೆಲವು ಅತಿ ಮುಖ್ಯ ಪುಸ್ತಕಗಳೆಂದರೆ, 'ಜನತೆ ಏಕೆ ಹೋರಾಡುತ್ತದೆ?', 'ಎರಡನೆ ಅಂತರಾಷ್ಟ್ರೀಯದ ಪತನ', 'ಎಡಪಂಥೀಯ ಸಮತಾವಾದ', 'ಫ್ರಾನ್ಸಿನಲ್ಲಿ ಅಂತರ್ಯುದ್ಧ', 'ಚಾರಿತ್ರಿಕ ಭೌತವಾದದ ಸಿದ್ದಾಂತ', 'ರೈತಾಪಿ ಜನರ ಏಳಿಗೆ ಮತ್ತು ಋಣಬಾಧೆ', ಇತ್ಯಾದಿ. ಅವರು ಚಿಂದಿ ಬಟ್ಟೆಯಲ್ಲಿದ್ದರೂ ಸಹ ಪುಸ್ತಕಗಳ ಜೋಳಿಗೆ ಅವರ ಕಂಕುಳಲ್ಲಿ ಸದಾ ಜೋತಾಡುತ್ತಿತ್ತು.

ಬಂಡೆಕಲ್ಲುಗಳನ್ನೇ ಪುಡಿಗಟ್ಟುವಷ್ಟು ತೀಕ್ಷ್ಣ ಶಕ್ತಿ ಹೊಂದಿದ್ದ ಭಗತಸಿಂಗ ಸೆರೆಮನೆಯ ಸಂಕಷ್ಟ, ಯಾತನೆಗಳಿಂದಾಗಿ ಕೊನೆಕೊನೆಗೆ ಬಸವಳಿದು ಕೃಷವಾಗಿದ್ದ ದೇಹ ಎಂಥಹವರಲ್ಲೂ ಕಣ್ಣೀರು ಹರಿಸುವಂತಿತ್ತು. ಆದರೆ ಅವರ ಕಣ್ಣುಗಳಲ್ಲಿನ ತೇಜಸ್ಸಿನ ಪ್ರಖರತೆ ಮತ್ತಷ್ಟು ಮಗಧಷ್ಟು ಇಮ್ಮಡಿಗೊಳ್ಳುತ್ತಿತ್ತು. ಸೆರೆಮನೆಯಲ್ಲಿದ್ದಷ್ಟೂ ದಿನವೂ 'ಕಾಕೋರಿ ದಿನೋತ್ಸವ', 'ಲೆನಿನ್ ದಿನೋತ್ಸವ', ಹೀಗೆ ಮುಂತಾದ ಕ್ರಾಂತಿಕಾರಿ ಉತ್ಸವಗಳನ್ನು ಆಚರಿಸುತ್ತಾ ಖುಷಿ ಪಡುತ್ತಿದ್ದರು.

ಸಂಪೂರ್ಣ ಮಾರ್ಕ್ಸ್ ವಾದಿಗಳಾಗಿ ಪರಿವರ್ತಿತರಾಗದಿದ್ದರು. ಮಾರ್ಕ್ಸ್ ವಾದವನ್ನು ಇಂಚಿಂಚೂ ಅಭ್ಯಸಿಸುತ್ತಾ ವಿಷಯದಿಂದ ವಿಷಯವನ್ನು ಗ್ರಹಿಸುವ ಪ್ರಕ್ರಿಯೆಯ ಹಾದಿಯಲ್ಲಿದ್ದರು. ಅವರು ಅಧ್ಯಯನದ ಮೂಲಕ ಸಿದ್ದಾಂತವನ್ನು ಒಂದು ಅಸ್ತ್ರವಾಗಿ ವಿರೋಧಿಗಳ ಕಪಟತೆಯನ್ನು ಛಿದ್ರಗೊಳಿಸಲು ಕ್ರಿಯೆಯಾಗಿ ಬಳಸುತ್ತಿದ್ದರು. ಲಾಹೋರ್ ಉಚ್ಚ ನ್ಯಾಯಾಲಯದಲ್ಲಿ ಭಗತ್ ಸಿಂಗ್ ನುಡಿದ ಮಾತುಗಳು ಅವರ ಪ್ರಖರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಂತಿವೆ: 'ಕ್ರಾಂತಿಯ ಖಡ್ಗವನ್ನು ವಿಚಾರದ ಸಾಣೆಕಲ್ಲಿನ ಮೇಲೆ ಹರಿತಗೊಳಿಸಲಾಗುತ್ತದೆ'.

ಗಾಂಧೀಜಿಯವರ ಬಗ್ಗೆ ಅವರಿಗೆ ಗೌರವವಿದ್ದರೂ ಸೈದ್ದಾಂತಿಕ ನಿಲುಮೆಯ ಕುರಿತು ಅವರು ಈ ರೀತಿ ನುಡಿದಿದ್ದಾರೆ: 'ಗಾಂಧೀಜಿಯು ಒಬ್ಬ ಉದಾರ ಹೃದಯದ ಪರೋಪಕರಿ ಮನುಷ್ಯ. ನಮಗೆ ಅಗತ್ಯವಿರುವುದು ಪರೋಪಕಾರವಲ್ಲ, ಆದರೆ ಚಲನಾತ್ಮಕ ವೈಜ್ಞಾನಿಕ ಸಾಮಾಜಿಕ ಶಕ್ತಿ'. ೧೯೨೯ ರಲ್ಲಿ ಅವರನ್ನು ಬಂಧಿಸುವ ಹೊತ್ತಿಗಾಗಲೇ ಅವರು ಭಯೋತ್ಪಾದಕ ಮತ್ತು ವ್ಯಕ್ತಿಗತವಾದ ವೀರೋಚಿತ ಕಾರ್ಯಗಳಲ್ಲಿ ನಂಬಿಕೆ ಕಳೆದುಕೊಂಡು "ಕ್ರಾಂತಿಯೊಂದು ಸಮೂಹಕ್ಕಾಗಿ ಸಮೂಹ ನಡೆಸುವ ಕ್ರಿಯೆ" ಎಂಬ ದೃಢ ನಿಲುಮೆಗೆ ಬಂದಿದ್ದರು. ಇದಕ್ಕೆ ಪೂರಕವಾಗಿಯೇನೋ ಎಂಬಂತೆ ಅವರನ್ನು ಗಲ್ಲಿಗೇರಿಸುವ ಸ್ವಲ್ಪ ಮುಂಚಿತವಾಗಿ "ನಿಜವಾದ ಕ್ರಾಂತಿಕಾರಿ ಸೇನೆಯು ಹಳ್ಳಿ ಮತ್ತು ಕಾರ್ಖಾನೆಗಳಲ್ಲಿವೆ" ಎಂದಿದ್ದರು.

ಭಗತ್ ಸಿಂಗ್ ಒಬ್ಬ ಮಾರ್ಕ್ಸ್ ವಾದಿಯಾಗಿದ್ದರು ಹಾಗೂ ಅಂದಿನ ಹಿಂದು ಮಹಾಸಭಾ ಮತ್ತು ಮುಸ್ಲಿಂ ಲೀಗ್ ನ ವಿರೋಧಿಯಾಗಿದ್ದರು.

ಕ್ರಾಂತಿಕಾರಿಯ ಸಾವಿನ ಘಳಿಗೆಗಳು

ಭಗತ್ ಸಿಂಗ್ ರವರ ಕೊನೆಯ ದಿನಗಳಲ್ಲಿ ಸಂಘಟನೆಯ ಬಹುತೇಕ ಮಂದಿ ಸೆರೆಮನೆಯಲ್ಲಿ ನ್ಯಾಯಾಲಯದ ಕುರಿತು ಚರ್ಚಿಸುತ್ತಿದ್ದಾಗ ರಾಜಗುರು ಮತ್ತು ಭಗತ ಸಿಂಗ ಇಬ್ಬರಿಗೂ ಗಲ್ಲಿಗೇರುವುದು ಖಚಿತವೆಂದು ತಿಳಿದಿದ್ದರಿಂದ ಅವರನ್ನು ಹೊರತುಪಡಿಸಿ ತಮಾಷೆಗಾಗಿ ಒಬ್ಬರ ಮೇಲೊಬ್ಬರು ಗಲ್ಲು ಶಿಕ್ಷೆ ವಿಧಿಸಿಕೊಂಡು ನಗೆಯಾಡುತ್ತಿದ್ದರು. 'ರಾಜಗುರು ಮತ್ತು ನನಗೆ ಏಕೆ ಶಿಕ್ಷೆ ವಿಧಿಸಲಿಲ್ಲ? ನಮ್ಮನ್ನು ಬಿಡುಗಡೆಗೊಳಿಸುತ್ತೀರೇನು?' ಎಂದು ನಗುತ್ತಾ ಕೇಳಿದ ಭಗತ್ ಸಿಂಗ್ ಮಾತುಗಳು ಅವರಲ್ಲಿ ಕಂಪನ ಸೃಷ್ಟಿಸಿದವು.

ಯಾರಲ್ಲಿಯೂ ಉತ್ತರವಿಲ್ಲದೆ ನಿಶ್ಯಬ್ಧ, ನಿರ್ಲಿಪ್ತತೆ ಆವರಿಸಿದವು. ಮತ್ತಷ್ಟು ಛೇಡಿಸುವ ಧ್ವನಿಯಲ್ಲಿ 'ವಾಸ್ತವವನ್ನು ಗುರುತಿಸಲು ಭಯವೇ?' ಎಂದು ಭಗತ್ ನುಡಿದಾಗ ಇನ್ನಷ್ಟು ನಿಶ್ಯಬ್ಧ ಮನೆಮಾಡಿ ಸೂತಕದ ವಾತಾವರಣ ಉಂಟಾಯಿತು. ನಿಶ್ಯಬ್ಧ ಮತ್ತು ಮೌನವನ್ನು ತನ್ನ ನಗುವಿನಿಂದ ಭೇಧಿಸುತ್ತಾ ಹೇಳಿದ:"ನಾವು ಸಾಯೋವರೆಗೆ ಕುತ್ತಿಗೆಗೆ ಕುಣಿಕೆ ಬೀರಿ ನಮ್ಮನ್ನು ನೇತು ಹಾಕುವುದು ನಿಜ, ಕಾಮ್ರೇಡ್ಸ್. ಇದು ನನಗೂ ಗೊತ್ತು. ನಿಮಗೂ ಗೊತ್ತು. ಮತ್ತೇಕೆ ಅದರತ್ತ ಕಣ್ಣು ಮುಚ್ಚಿಕೊಳ್ಳಬೇಕು?

ರಾಷ್ಟ್ರಾಭಿಮಾನಕ್ಕಾಗಿ ಸಿಗುವ ಅತ್ಯುನ್ನತ ಬಹುಮಾನ ಅದು. ಅದು ನನಗೇ ಸಿಗುತ್ತಿರುವುದರಿಂದ ನನಗೆ ಹೆಮ್ಮೆಯೇ. ನನ್ನ ಬಾಹ್ಯ ದೇಹವನ್ನು ನಾಶಗೊಳಿಸಿ ಈ ರಾಷ್ಟ್ರದಲ್ಲಿ ಅವರು ಸುರಕ್ಷಿತವಾಗಿರಬಹುದೆಂದು ಭಾವಿಸಿದ್ದಾರೆ. ಅದು ತಪ್ಪು ಕಲ್ಪನೆಯಷ್ಟೆ. ಅವರು ನನ್ನನ್ನು ಕೊಲ್ಲಬಹುದಾದರೂ, ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ವಿಚಾರಗಳಿಗೆ ಸಾವಿಲ್ಲ, ಸಿದ್ದಾಂತಗಳಿಗೆ ಅಳಿವಿಲ್ಲ. ಅವರು ನನ್ನ ದೇಹವನ್ನು ಪುಡಿಗಟ್ಟಹುದು. ಆದರೆ ನನ್ನ ಚೈತನ್ಯವನ್ನು ಪುಡಿಗಟ್ಟಲಾರರು.

ಬ್ರಿಟೀಷರು ಈ ನೆಲದಿಂದ ಕಂಬಿ ಕೀಳುವವರೆಗೂ ನನ್ನ ವಿಚಾರಗಳು ಅವರನ್ನು ಅನಿಷ್ಟದಂತೆ ಬೆಂಬಿಡದೆ ಕಾಡುತ್ತವೆ". "ಇದು ಒಂದೆಡೆಯ ಚಿತ್ರಣವಷ್ಟೆ. ಮತ್ತೊಂದೆಡೆಯದ್ದು ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಬ್ರಿಟೀಷ್ ಗುಲಾಮಕೋರರಿಗೆ ಜೀವಂತ ಭಗತ್ ಸಿಂಗ್ ಗಿಂತ ಸತ್ತ ಭಗತ್ ಸಿಂಗ್ ಹೆಚ್ಚು ಅಪಾಯಕಾರಿ. ನನ್ನನ್ನು ನೇಣಿಗೇರಿಸಿದ ನಂತರ, ನನ್ನ ಕ್ರಾಂತಿಕಾರಿ ವಿಚಾರಗಳ ಸುವಾಸನೆಯು ನಮ್ಮ ಸುಂದರನಾಡಿನ ವಾತಾವರಣದಲ್ಲಿ ಪಸರಿಸುತ್ತದೆ.

ಅವು ಯುವಜನರನ್ನು ಪ್ರೇರೇಪಿಸಿ ಸ್ವಾತಂತ್ರ್ಯ ಮತ್ತು ಕ್ರಾಂತಿಗಾಗಿ ಅವರನ್ನು ಹುಚ್ಚರನ್ನಾಗಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ವಿನಾಶದಂಚಿಗೆ ತಳ್ಳುತ್ತವೆ. ಇದು ನನ್ನ ಖಚಿತಾಭಿಪ್ರಾಯ. ರಾಷ್ಟ್ರಕ್ಕಾಗಿ ನಾನು ಸಲ್ಲಿಸಿದ ಸೇವೆ ಮತ್ತು ನನ್ನ ಜನತೆಗಾಗಿ ತೋರಿದ ಪ್ರೀತಿಗಳಿಗೆ ನೀಡುವ ಅತ್ಯುನ್ನತ ಬಹುಮಾನವನ್ನು ನಾನು ಪಡೆಯುವ ದಿನವನ್ನು ಅತಿ ಕಾತುರತೆಯಿಂದ, ಸಂಭ್ರಮ ಸಡಗರದಿಂದ ಇದಿರು ನೋಡುತ್ತಿದ್ದೇನೆ".

ಭಗತ್ ಸಿಂಗ್ ರು ಜೈಲಿನಲ್ಲಿ ಕಳೆದ ಕೊನೆಯ ದಿನಗಳಂದು ಅವರ ತಾಯಿಯ ದಿಟ್ಟತನದ ನುಡಿಗಳು ನಿಜಕ್ಕೂ ಆಪ್ಯಾಯಮಾನ: "ನಿನ್ನ ನಿಲುಮೆಯನ್ನು ಎಂದಿಗೂ ಬದಲಿಸಬೇಡ. ಪ್ರಪಂಚವೇ ಮರೆಯಲಾಗದ ಸಾವು ಎಂದಿಗೂ ಅತ್ಯುತ್ತಮವಾದದ್ದು. 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಯನ್ನು ಕೊನೆಯವರೆಗೂ ಕೂಗುತ್ತಿರು. ಯಾವ ತಾಯಿಗೂ ಲಭಿಸದ ಹೆಮ್ಮೆ ನನಗುಂಟಾಗಿದೆ".

ಜೈಲಿನ ವಾರ್ಡನ್ ಚರತ್ ರವರು ಭಗತ್ ಸಿಂಗ್ ಓದಲು ಬಯಸಿದ ಎಲ್ಲ ಪುಸ್ತಕಗಳನ್ನೂ ಜೈಲಿನ ಸೆಲ್ಲಿನೊಳಕ್ಕೆ ಕದ್ದು ತಂದುಕೊಡುತ್ತಿದ್ದರೂ ಭಗತ್ ಸಿಂಗ್ ಓದುವ ವೇಗಕ್ಕೆ ತಕ್ಕಂತೆ ಪುಸ್ತಕಗಳನ್ನೂ ಪೂರೈಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಸಾವಿನ ಕರೆಗಂಟೆಯಂತೆ ಸೈನಿಕ ನೊಬ್ಬ ನೇಣುಗಂಬಕ್ಕೆ ಎಳೆದೊಯ್ಯಲು ಬಂದಾಗಲೂ ಲೆನಿನ್ ಕುರಿತ ಪುಸ್ತಕವನ್ನೋದುತ್ತಿದ್ದ ಭಗತ್ಸಿಂಗ್ರು ಸ್ವಲ್ಪವೂ ವಿಚಲಿತರಾಗದೆ ಪುಸ್ತಕ 'ಮುಗಿಸಿದ ನಂತರ ಬಂದರಾಗುತ್ತದಲ್ಲವೇನು?' ಎಂದು ಸೈನಿಕನಿಗೆ ಗಂಭೀರವಾಗಿಯೇ ಕೇಳಿದುದು ನಿಜಕ್ಕೂ ಮೈನವಿರೇಳಿಸುತ್ತದೆ.

ಗಲ್ಲಿಗೇರಿಸುವ ದಿನ ಸಹ ಎದೆಗುಂದದೆ ಖುಷಿಯಿಂದಿದ್ದರು. ಗಲ್ಲು ಸ್ಥಳದ ಪ್ಲಾಟ್ಫಾರಂ ಮೇಲೆ ನಿಂತು ಹಗ್ಗಕ್ಕೆ ಮುತ್ತಿಕ್ಕುತ್ತಾ "ಇಂಕ್ವಿಲಾಬ್ ಜಿಂದಾಬಾದ್" ಘೋಷಣೆ ಮಾಡುತ್ತಾ ಸುಖ್ದೇವ್, ಭಗತ್ ಮತ್ತು ರಾಜಗುರು ಕುಣಿಕೆ ಬೀರಿಕೊಂಡರು. ಅಂದು ಸೆರೆಮನೆಯಲ್ಲಿ ಶ್ಮಶಾನಮೌನ ಆವರಿಸಿ, ಯಾರೊಬ್ಬರೂ ಆಹಾರ ಮುಟ್ಟಲಿಲ್ಲ. ಅವರನ್ನು ಗಲ್ಲಿಗೇರಿಸಿದ ವಿಷಯ ತಿಳಿಯದ ಅವರ ಸಂಬಂಧಿಕರು ಸಂಧಿಸಲು ಬಂದಾಗ ಗದ್ಗದಿತರಾದರು.

ಸಟ್ಲೆಜ್ ನದಿತೀರದಲ್ಲಿ ಕ್ರಾಂತಿಕಾರಿಗಳ ದೇಹವನ್ನು ರಹಸ್ಯವಾಗಿ ಸುಡುತ್ತಿರುವ ವಿಷಯ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸತೊಡಗಿದರು. ಅಲ್ಲಿ ದೊರೆತದ್ದು ಅರೆಬರೆ ಸುಟ್ಟ ಕ್ರಾಂತಿಕಾರಿಗಳ ದೇಹದ ಬೂದಿಯಷ್ಟೆ. ಬ್ರಿಟಿಷರು ಭಗತ್ ಸಿಂಗ್ ನ್ನು ಕೊಂದದ್ದು ಅವರ ಸಾಮ್ರಾಜ್ಯಶಾಹಿ ಭೂಪಟಕ್ಕೆ ತಾವೇ ಚೂರಿಯಿಂದ ತಿವಿದುಕೊಂಡಂತಾಯಿತಷ್ಟೆ. ಭಗತ್ರನ್ನು ರಕ್ಷಿಸಲು ಗಾಂಧೀಜಿ ನಡೆಸಿದ ಪ್ರಯತ್ನಗಳನ್ನು ಪ್ರಶ್ನಿಸಿ ದೇಶದಾದ್ಯಂತ ಯುವಕರ ಪಡೆಯು ಅವರು ಸಿಕ್ಕಲ್ಲೆಲ್ಲ ಧಮಕಿ ಹಾಕತೊಡಗಿತು.

ಅಂಥಹದೊಂದು ಸಂದರ್ಭದಲ್ಲಿ ಅವರು ನೀಡಿದ ಉತ್ತರ ಎಂಥಹವರಲ್ಲೂ ವೇದನೆ ಮೂಡಿಸದಿರದು: "ಭಗತ್ಸಿಂಗ್ರನ್ನು ರಕ್ಷಿಸಲು ನನಗಿಚ್ಚೆಯಿರಲಿಲ್ಲವೆಂಬುದು ಸತ್ಯಕ್ಕೆ ದೂರವಾದದ್ದು. ಆದರೆ ನೀವು ಭಗತ್ಸಿಂಗ್ ಎಸಗಿರುವ ತಪ್ಪನ್ನೂ ಅರ್ಥಮಾಡಿಕೊಳ್ಳಬೇಕು". ಆದರೆ ಹಿಂಸೆಯ ಕುರಿತೂ ಬೇಸತ್ತಿದ್ದ ಭಗತ್ಗೆ ಗಾಂಧಿಯ 'ಬೇಜವಾಬ್ದಾರಿ ಯುವಕರು' ಎಂಬ ವರ್ಣನೆ ಕಿರಿಕಿರಿ ಉಂಟು ಮಾಡಿತ್ತು.

ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ಕಿತ್ತುಕೊಳ್ಳಬೇಕೇ ಹೊರತು ಅದೇನೂ ಆಕಾಶದಿಂದ ಬೀಳುವುದಿಲ್ಲ ಅಥವಾ ಚಳುವಳಿಗಳನ್ನು ಹಿಂತೆಗೆದುಕೊಂಡು ಶಾಂತಿಯ ಹೋಮ ಮಾಡಿದರೆ ಬರುವುದಲ್ಲವೆಂದು ಭಗತರಿಗೆ ತಿಳಿದಿತ್ತು. ಕ್ರಾಂತಿಕಾರಿಗಳೆಂದರೆ ಕ್ರೌರ್ಯ, ಬೀಭತ್ಸತೆಗಳ ಮುಖವಾಡ ಹೊದ್ದವರೆಂದು ಭಾವಿಸುವವರು ಭಗತರ ತೇಜಸ್ಸು ತುಂಬಿದ ಮುಖವನ್ನು ನೋಡಿದಲ್ಲಿ ಅವನೊಬ್ಬ ಅಸಾಧಾರಣ ಅದ್ಭುತವೇ ಸರಿಯೆನಿಸುತ್ತದೆ.

ಭಗತ್ ಸಿಂಗ್ ಯಾವುದೇ ಕ್ಷಣದಲ್ಲೂ ಸಹ ಸಾಧಕನ ಮೂರ್ತಿವೆತ್ತ ಪ್ರತಿಮೆಯಂತಿದ್ದರು. ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೇ ಅಂತಿಮ ಧ್ಯೇಯವೆನ್ನುವ ಅವರ ಮಾತುಗಳು, ಅವರಲ್ಲಿಯ ಮಾನವತೆಯು ಹೆಬ್ಬಂಡೆಯೊಳಗೆ ಅರಳಿ ನಿಂತಿರುವ ಹೂವುಗಳಂತೆ ಸದಾ ರಾರಾಜಿಸುತ್ತಿತ್ತು. ಸದಾ ಕತ್ತಿಯ ಅಲುಗಿನ ಮೇಲೆಯೇ ನಡೆಯುತ್ತಿದ್ದ ಯುವಜನರ ಆಸ್ಫೋಟಕ ಧ್ವನಿ ಇನ್ನಿಲ್ಲದಂತಾದರೂ ಅಂಥಹ ಸಾವಿರಾರು ಪ್ರತಿಧ್ವನಿಗೆ ಕಾರಣವಾಗುವಲ್ಲಿ ಯಶಸ್ವಿಯಾದರು.

ಅವರ ಸಾವು ಸ್ವಾತಂತ್ರ್ಯದ ಕಿಡಿಯನ್ನು ದೇಶಾದ್ಯಂತ ಮತ್ತಷ್ಟು ವ್ಯಾಪಿಸಿ ಯುವಜನರಲ್ಲಿ ವಿದ್ಯುತ್ ಸಂಚಲನ ಉಂಟುಮಾಡಿತು. ಭಗತ್ ಸಿಂಗ್ ಭವಿಷ್ಯವಾಣಿ ಸುಳ್ಳಾಗಲಿಲ್ಲ. ಅವರ ಹೆಸರು ಸಾವಿಗಳುಕದ ಧೈರ್ಯ, ತ್ಯಾಗ ಬಲಿದಾನ, ರಾಷ್ಟ್ರಾಭಿಮಾನ ಮತ್ತು ತದೇಕಚಿತ್ತತೆಯ ಹೋರಾಟಗಳ ಪ್ರತೀಕವಾಯಿತು. ಅವರ 'ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ)' ಘೋಷಣೆಯು ಇಡೀ ರಾಷ್ಟ್ರದ ಯುದ್ದದ ಕೂಗಾಗಿ ಮಾರ್ಪಟ್ಟು ಸಮಾಜವಾದಿ ಸಮಾಜ ನಿರ್ಮಾಣದ ಕನಸನ್ನು ವಿದ್ಯಾವಂತ ಯುವಜನರಲ್ಲಿ ಹಿಡಿದಿಟ್ಟಿತು.

೧೯೩೦-೩೨ ರಲ್ಲಿ ಎಲ್ಲ ಜನರು ಒಂದೇ ಮನುಷ್ಯನಂತೆ ನಿಂತರು. ಸೆರೆಮನೆವಾಸಗಳು, ಛಡಿಯೇಟುಗಳು, ಮತ್ತು ಲಾಠಿಯೇಟುಗಳು ಅವರ ಸ್ಫೂರ್ತಿಯನ್ನು ಕಂಗೆಡಿಸಲು ಸಾಧ್ಯವಾಗಲಿಲ್ಲ. ೧೯೪೫-೪೬ ರಲ್ಲಿ ನವಭಾರತ ಉದಯಿಸಿದ್ದನ್ನು ಇಡೀ ಪ್ರಪಂಚವೇ ಕಣ್ಣಾರೆ ಕಂಡಿತು. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಜನರು, ಜಲಸೇನೆ, ಭೂಸೇನೆ, ವಾಯುಸೇನೆ, ಮತ್ತು ಪೊಲೀಸರು ಸಹ ಬಲವಾದ ಹೊಡೆತಗಳನ್ನನುಭವಿಸಿದರು.

೧೯೩೦ ರವರೆಗೆ ಕೆಲವೇ ಕೆಲವರಲ್ಲಿದ್ದ ತ್ಯಾಗ, ಬಲಿದಾನ ಮತ್ತು ಅರ್ಪಣಾ ಮನೋಭಾವನೆಗಳು ಸಮೂಹ ಪ್ರಕ್ರಿಯೆಯಾಗಿ ರಾಷ್ಟ್ರಾದ್ಯಂತ ದಂಗೆಯು ವ್ಯಾಪಿಸಿತು. ಭಗತ್ ಸಿಂಗ್ ಅವರಿಗೆ ಸ್ವಾತಂತ್ರ್ಯ ಸಿಗುವ ಕುರಿತು ಯಾವುದೇ ಅನುಮಾನವಿರಲಿಲ್ಲವಾದರೂ ಅವರು ಆತಂಕ ಗೊಂಡಿದದ್ದು ಬಿಳಿ ಸಾಹೇಬರು ಖಾಲಿ ಮಾಡಿದ ಆಸನದಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುವರೆಂಬ ಭಯದಿಂದ. 'ಕೇವಲ ಯಜಮಾನರ ಬದಲಾವಣೆಯಿಂದ ಸ್ವಾತಂತ್ರ್ಯ ಬಂದಂತಾಗುವುದಿಲ್ಲ.

ಪುರಾತನ ವ್ಯವಸ್ಥೆಯನ್ನು ನಾಶಮಾಡದೆ ಹೊಸ ಬದಲಾವಣೆಯನ್ನು ತರುವುದು ಸಾಧ್ಯವಿಲ್ಲ' ಎಂದು ಭಗತ್ ಸಿಂಗ್ ರವರಿಗೆ ಮನವರಿಕೆಯಾಗಿತ್ತು. ಆದರೆ ಪ್ರತಿಭಟನೆಯ ದಿವ್ಯ ಜ್ಯೋತಿ ಆರದಂತೆ ಉರಿಯಲು ತನ್ನಂಥವರು ಸಾಯಲೇಬೇಕೆಂದು ಭಗತ್ ನಂಬಿದ್ದ. ಮಾರ್ಚ್ ೨೩ ೧೯೩೧ ರಂದು ಇವರನ್ನು ಬ್ರಿಟಿಷ್ ಸರ್ಕಾರವು ಗಲ್ಲಿಗೇರಿಸಿತು. . ಭಗತ್ ಸಿಂಗ್ ಸಂಪೂರ್ಣ ನಾಸ್ತಿಕ ಮತ್ತು ಜಾತಿವಿರೋಧಿಯಾಗಿದ್ದರು ಸಾಯುವ ಕೆಲವೇ ನಿಮಿಷಗಳ ಮೊದಲು ಪ್ರಾರ್ಥನೆಯಂತೆ ಭಗತ್ ನುಡಿದ ಮಾತುಗಳು ಎಂಥವರನ್ನೂ ಕೆಚ್ಚೆದೆಯ ಉತ್ತುಂಗಕ್ಕೇರಿಸಬಲ್ಲವು. *'ಮೊದಲು ನಿಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ನಂತರ ಕೆಲಸ ಮಾಡಲು ತೊಡಗಿ. ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು; ದೃಡ ನಿರ್ಧಾರ ಬೇಕು; ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ.'

1. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಭಗತ್ ಸಿಂಗ್ ತುಂಬಾ ವಿಚಲಿತರಾದರು, ಅವರು ರಕ್ತಪಾತದ ಸ್ಥಳಕ್ಕೆ ಭೇಟಿ ನೀಡಲು ಶಾಲೆಗೆ ಬಂಕ್ ಮಾಡಿದರು. ಕಾಲೇಜಿನಲ್ಲಿ, ಅವರು ಶ್ರೇಷ್ಠ ನಟರಾಗಿದ್ದರು ಮತ್ತು 'ರಾಣ ಪ್ರತಾಪ' ಮತ್ತು 'ಭಾರತ-ದುರದಶ' ಮುಂತಾದ ನಾಟಕಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದರು.

2. ಭಗತ್ ಸಿಂಗ್ ಬಾಲ್ಯದಲ್ಲಿ ಯಾವಾಗಲೂ ಬಂದೂಕಿನ ಬಗ್ಗೆ ಮಾತನಾಡುತ್ತಿದ್ದರು. ಅವರು ಬ್ರಿಟೀಷರೊಂದಿಗೆ ಹೋರಾಡಬಲ್ಲದನ್ನು ಬಳಸಿ ಗದ್ದೆಗಳನ್ನು ಬೆಳೆಯಲು ಬಯಸಿದ್ದರು. ಅವನು 8 ವರ್ಷದವನಾಗಿದ್ದಾಗ, ಆಟಿಕೆಗಳು ಅಥವಾ ಆಟಗಳ ಬಗ್ಗೆ ಮಾತನಾಡುವ ಬದಲು ಅವನು ಯಾವಾಗಲೂ ಬ್ರಿಟಿಷರನ್ನು ಭಾರತದಿಂದ ಓಡಿಸುವ ಬಗ್ಗೆ ಮಾತನಾಡುತ್ತಾನೆ.

3. ಭಗತ್ ಸಿಂಗ್ ಮದುವೆಯಾಗಬೇಕೆಂದು ಆತನ ಪೋಷಕರು ಬಯಸಿದಾಗ, ಅವರು ಕಾನ್ಪುರಕ್ಕೆ ಓಡಿಹೋದರು. ಅವನು ತನ್ನ ಹೆತ್ತವರಿಗೆ "ನಾನು ಬ್ರಿಟಿಷ್ ರಾಜ್ ಇರುವ ವಸಾಹತು ಭಾರತದಲ್ಲಿ ಮದುವೆಯಾದರೆ, ನನ್ನ ವಧು ನನ್ನ ಸಾವು ಆಗುತ್ತದೆ. ಆದ್ದರಿಂದ, ನನಗೆ ಈಗ ವಿಶ್ರಾಂತಿ ಅಥವಾ ಲೌಕಿಕ ಬಯಕೆ ಇಲ್ಲ" ಎಂದು ಹೇಳಿದನು. "ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್" ಗೆ ಸೇರಿದರು.

೪.ಅವರು ಚಿಕ್ಕ ವಯಸ್ಸಿನಲ್ಲೇ ಲೆನಿನ್ ನೇತೃತ್ವದ ಸಮಾಜವಾದ ಮತ್ತು ಸಮಾಜವಾದಿ ಕ್ರಾಂತಿಗಳತ್ತ ಆಕರ್ಷಿತರಾದರು ಮತ್ತು ಅವರ ಬಗ್ಗೆ ಓದಲು ಆರಂಭಿಸಿದರು. ಭಗತ್ ಸಿಂಗ್ ಹೇಳಿದರು 'ಅವರು ನನ್ನನ್ನು ಕೊಲ್ಲಬಹುದು, ಆದರೆ ನನ್ನ ಕಲ್ಪನೆಗಳಲ್ಲ. ಅವರು ನನ್ನ ದೇಹವನ್ನು ತುಳಿಯಬಹುದು, ಆದರೆ ನನ್ನ ಚೈತನ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ.


5. ಭಗತ್ ಸಿಂಗ್ ಬ್ರಿಟಿಷರಿಗೆ "ಗಲ್ಲಿಗೇರಿಸುವ ಬದಲು ಆತನನ್ನು ಗುಂಡಿಕ್ಕಿ ಕೊಲ್ಲಬೇಕು" ಎಂದು ಹೇಳಿದ್ದರು ಆದರೆ ಬ್ರಿಟಿಷರು ಅದನ್ನು ಪರಿಗಣಿಸಲಿಲ್ಲ. ಅವರು ಇದನ್ನು ತಮ್ಮ ಕೊನೆಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಭಗತ್ ಸಿಂಗ್ ಈ ಪತ್ರದಲ್ಲಿ ಹೀಗೆ ಬರೆದಿದ್ದಾರೆ, "ಯುದ್ಧದ ಸಮಯದಲ್ಲಿ ನನ್ನನ್ನು ಬಂಧಿಸಲಾಯಿತು. ಆದ್ದರಿಂದ, ನಾನು ಶಿಕ್ಷೆಯಾಗಲು ಸಾಧ್ಯವಿಲ್ಲ

6.ಸಹವರ್ತಿಗಳೊಂದಿಗೆ, ಭಗತ್ ಸಿಂಗ್ ಅವರು ಕೇಂದ್ರ ಶಾಸಕಾಂಗ ಸಭೆಯಲ್ಲಿ ಬಾಂಬ್‌ಗಳನ್ನು ಎಸೆದರು. ಅವರು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಬಾಂಬ್‌ಗಳನ್ನು ಕಡಿಮೆ ದರ್ಜೆಯ ಸ್ಫೋಟಕಗಳಿಂದ ಮಾಡಲಾಗಿತ್ತು.

7. ಅವರು ಜೈಲಿನಲ್ಲಿರುವಾಗ ಉಪವಾಸ ಸತ್ಯಾಗ್ರಹ ಮಾಡಿದರು. ಈ ಸಮಯದಲ್ಲಿ ಅವರು ಹಾಡುವುದು, ಬರೆಯುವ ಪುಸ್ತಕಗಳನ್ನು ಓದುವುದು, ಪ್ರತಿದಿನ ನ್ಯಾಯಾಲಯಕ್ಕೆ ಭೇಟಿ ನೀಡುವುದು ಮುಂತಾದ ತನ್ನ ಎಲ್ಲಾ ಕೆಲಸಗಳನ್ನು ನಿಯಮಿತವಾಗಿ ಮಾಡುತ್ತಿದ್ದರು ಎಂಬುದು ಆಶ್ಚರ್ಯಕರವಾಗಿದೆ.

8. ಭಗತ್ ಸಿಂಗ್ ಅವರು 'ಇಂಕ್ವಿಲಾಬ್ ಜಿಂದಾಬಾದ್' ಎಂಬ ಪ್ರಬಲ ಘೋಷಣೆಯನ್ನು ರೂಪಿಸಿದರು, ಇದು ಭಾರತದ ಸಶಸ್ತ್ರ ಹೋರಾಟದ ಘೋಷಣೆಯಾಯಿತು.

9.ಮಾರ್ಚ್ 23, 1931 ರಂದು ಅಧಿಕೃತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಅವರನ್ನು ಗಲ್ಲಿಗೇರಿಸಲಾಯಿತು. ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಿದಾಗ ಅವರು ನಗುತ್ತಿದ್ದರು ಎಂದು ಹೇಳಲಾಗಿದೆ. ವಾಸ್ತವವಾಗಿ, ಇದನ್ನು "ಕೆಳಮಟ್ಟದ ಬ್ರಿಟಿಷ್ ಸಾಮ್ರಾಜ್ಯಶಾಹಿ" ಗೆ ನಿರ್ಭೀತಿಯಿಂದ ಮಾಡಲಾಯಿತು.

10. ಆತನ ತಾಯಿ ಜೈಲಿನಲ್ಲಿ ಅವರನ್ನು ಭೇಟಿ ಮಾಡಲು ಬಂದಾಗ, ಭಗತ್ ಸಿಂಗ್ ಜೋರಾಗಿ ನಗುತ್ತಿದ್ದ. ಇದನ್ನು ನೋಡಿದ ಜೈಲು ಅಧಿಕಾರಿಗಳು ಸಾವಿಗೆ ಹತ್ತಿರವಾಗಿದ್ದರೂ ಬಹಿರಂಗವಾಗಿ ನಗುತ್ತಿರುವ ಈ ವ್ಯಕ್ತಿ ಹೇಗಿದ್ದಾರೆ ಎಂದು ನೋಡಿ ಗಾಬರಿಯಾದರು. ಅವರ ವ್ಯಕ್ತಿತ್ವ ಅನೇಕರ ಹೃದಯದಲ್ಲಿ ಅಚ್ಚಳಿಯದೆ ಇನ್ನೂ 100 ವರ್ಷ ಕಳೆದರೂ ಇರುತ್ತದೆ.

ಲೇಖಕರು : ಸಿದ್ದಲಿಂಗ ಶಿವಯೋಗಿ ಮಠಪತಿ ಉಚ್ಚಾ. ತಾ. ಭಾಲ್ಕಿ.


Show more
0
233
https://avalanches.com/in/bidar__28_1896605_28_08_2021


ಪೂಜ್ಯ ಶ್ರೀ ದಿವ್ಯಯೋಗಿ ಕಂಠಯ್ಯ ಸ್ವಾಮಿಗಳ ಮಾಸಿಕ ಶಿವಾನುಭವ ಗೋಷ್ಠಿ.

ಭಾಲ್ಕಿ : ಪೂಜ್ಯ ಶ್ರೀ ದಿವ್ಯಯೋಗಿ ಕಂಠಯ್ಯ ಸ್ವಾಮೀಜಿಯವರ 28ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ನಡೆಯಿತು.

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪೂಜ್ಯೆ ಮಾತೆ ನೀಲಾಂಬಿಕಾ ತಾಯಿ ಚನ್ನಬಸವಾಶ್ರಮ ಕುರುಬಖೇಳಗಿ ಅವರ ಇಷ್ಟಲಿಂಗ ಪೂಜೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಪೂಜ್ಯ ಮಲ್ಲಮ್ಮ ತಾಯಿ ನಾಗನಕೆರೆ ಅಧ್ಯಕ್ಷರು ಕದಳಿ ಮಹಿಳಾ ವೇದಿಕೆ ಅವರು ತಮ್ಮ ಆಶೀರ್ವಚನ ನೀಡಿದರು. ಅವರು ಶ್ರೀ ದೀವ್ಯಯೋಗಿ ಕಂಠಯ್ಯ ಸ್ವಾಮಿಗಳು ಜ್ಞಾನಿಗಳು , ಯೋಗಿಗಳು ಆಗಿದ್ದು ತಮ್ಮ ಶಿಷ್ಯವೃಂದದ ಕಾಳಜಿ ವಹಿಸುವವರು ಆಗಿದ್ದರು. ಜನರಿಗೆ ಮಾರ್ಗದರ್ಶನ ಮಾಡುತ್ತ ಅವರ ಕಷ್ಟ , ನೋವಿಗೆ, ದುಃಖಕ್ಕೆ ಸ್ಪಂದಿಸಿ ಪರಿಹಾರ ನೀಡಿ ಜನಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಸಂತ ಹುಣಸನಾಳೆ ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಭಾಲ್ಕಿ ಅವರು ಮಾತನಾಡಿ ತಂದೆ-ತಾಯಿಗಳಿಗೆ ಅವರು ಬದುಕಿದ್ದಾಗ ಅವರ ಸೇವೆ ಮಾಡುವುದು ತುಂಬಾ ಮುಖ್ಯ ಹಾಗೆಯೇ ಅಣ್ಣತಮ್ಮಂದಿರು ,ಅಕ್ಕ ತಂಗಿಯರು ಎಲ್ಲರೊಡನೆ ಕೂಡಿಕೊಂಡು ಸುಖವಾಗಿ ಬಾಳಬೇಕೆಂದು ಹೇಳಿದರು. ಶ್ರೀ ಶಾಂತಯ್ಯ ಸ್ವಾಮಿಯವರು ತಮ್ಮ ತಂದೆಯು ಬದುಕಿರುವಾಗಲೂ ಮತ್ತು ಅವರ ಐಕ್ಯದ ನಂತರವೂ ಪ್ರತಿ ಮಾಸವು ಅವರ ಸ್ಮರಣೆಯಲ್ಲಿ ಶಿವಾನುಭವ ಗೋಷ್ಠಿಯನ್ನೂ ನಡೆಸಿಕೊಂಡು ಬರುತ್ತಿರುವುದು ನಮಗೆ ತುಂಬಾ ಖುಷಿ ತಂದಿದೆ. ಈಗಿನ ಕಾಲದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮಾಡುತ್ತಿರುವುದು ಎಲ್ಲರಿಗೂ ಪ್ರೆರಣೆದಾಯಕವಾಗಲಿ ಎಂದರು.

ಬಸವಗುರು ಪೂಜೆಯನ್ನು ನೆರವೇರಿಸಿದ ಶಿವಕಲ್ಯಾಣಿ ಬಸವಾನಂದ ಗಡ್ಡೆ ದಂಪತಿಗಳು , ನಂತರ ಮಾತನಾಡಿದ ಬಸವಾನಂದ ಗಡ್ಡೆ ನಾವೆಲ್ಲರೂ ಈ ಸಮಾಜದಲ್ಲಿ ಹೇಗೆ ಮೀನು ನೀರು ಬಿಟ್ಟು ಬದುಕಲಾಗದೊ ಹಾಗೆ ನಾವು ಸಹ ಈ ಸಮಯಕ್ಕೆ ಬದಲಾಗುತ್ತಿರುವ ಜನರ ಮದ್ಯೆ ನಾವೆಲ್ಲರೂ ಒಟ್ಟಿಗೆ ಇದ್ದು ಇಂತಹ ಶಿವಾನುಭವ ಗೋಷ್ಠಿ ಕಾರ್ಯಕ್ರಮಗಳನ್ನು ಆಗಾಗ್ಗೆ ಅಳಿಸಿ ಎಲ್ಲರೊಡನೆ ಬೆರೆತು ಬಾಳಿದರೆ ಜೀವನ ಸ್ವರ್ಗ ಎಂದರು. ಕಾರ್ಯಕ್ರಮವು ಗುರು ಪ್ರಸಾದ ದೊoದಿಗೆ ಮುಕ್ತಾಯವಾಯಿತು.

ಸಂತೋಷ ಹಡಪದ ಸ್ವಾಗತಿಸಿದರು. ಪಾರ್ವತಿ ಎನ್ ಮಲ್ಲಾಮಾಡೆ, ಸುನೀತಾ ಸ್ವಾಮಿ, ಕವನಾ ಸ್ವಾಮಿ ಚಂದನಾ ಸ್ವಾಮಿ , ಪ್ರೇಮಕುಮಾರ ಇತರರು ಉಪಸ್ಥಿತರಿದ್ದರು.

ಶ್ರೀದೇವಿ ಎಸ್. ಸ್ವಾಮಿ ವಚನ ಗಾಯನ ಮಾಡಿದರು. ಶಾಂತಯ್ಯಾ ಸ್ವಾಮಿ ವಂದಿಸಿದರು.

ಸಿದ್ದಲಿಂಗ ಸ್ವಾಮಿ ನಿರೂಪಿಸಿದರು.


Show more
0
51

SON'S LOVE


"In the name of my dad

I startup my day"

May you would be with me

So I could celebrate this moment

With you;

I think you are with me

In my every work.


I love you dad!

Show more
0
42
Other News India

Optical Networking and Communication Market Growth Scenario 2033


According to the Regional Research Reports, the Global Optical Networking and Communication Market size is estimated to be USD 26.38 billion in 2023 to USD 62.45 billion by 2033, exhibiting a CAGR of 9.0% from 2023 to 2033.


Request Sample Copy of this Report: https://www.regionalresearchreports.com/request-sample/optical-networking-and-communication-market/ICT-8512

Show more
0
4

Title: "Education for All: Unlocking Human Potential and Building a Better World"


In a world driven by innovation and progress, access to education stands as the key to unlocking the large potential within every individual. The idea of "Education for All" is to eliminate social boundaries,transcends borders and emphasizing the importance of making quality education accessible to every person, regardless of their background or circumstances. In this blog, we explore into the significance of this universal goal and the impact it has on our global society.

Education as a Universal Right


Education is often cheered as a universal human right, promoted in international declarations and agreements. It is a force that can level the playing field, offering opportunities and hope to those who might otherwise be left behind. Here are some compelling reasons why education for all is a critical imperative:


Empowerment: Education empowers individuals to shape their destinies,make informed decision and think critically. It nurtures self-confidence and enables people to contribute actively to their communities and societies.


Breaking the Cycle of Poverty: Education is a powerful tool for poverty alleviation. It equips individuals with the skills needed to improve their livelihoods, secure better job opportunities, and break free from the cycle of poverty.


Promoting Equality: Education for all fosters social equality. It ensures that everyone, regardless of their gender, physical abilities, or socio-economic status, has an equal chance to reach their full potential.


In conclusion, education for all is not just a slogan; it is a call to action that can transform our world. By providing inclusive, accessible, and high-quality education, we can harness the potential of every individual,build more equitable and peaceful societies and stimulate economic development. It is a shared responsibility to work together towards a world where every person, regardless of their circumstances, has the opportunity to receive a quality education and contribute to a brighter future for all.

Show more
0
5

Mobile Wi-Fi Market Size, Industry Share, Report and Global Forecast till 2023-2033


According to the Regional Research Reports, the Global Mobile Wi-Fi Market size is estimated to be USD 10.18 billion in 2023 to USD 16.9 billion by 2033, exhibiting a CAGR of 5.1% from 2023 to 2033.


Request Sample Copy of this Report: https://www.regionalresearchreports.com/request-sample/mobile-wi-fi-market/ICT-8511


Show more
0
6

Work environment at Dell


This is the story of an Alumni of Parul University’s Computer Science and Engineering branch. The student got placed in his dream company, Dell Inc.

The student, in his live session with an RJ, spoke about the atmosphere he is experiencing at the Dell Inc. Office. The Alumni said how relaxing the work from home policy was, the flexibility and how his employers focus on quality of work rather than the time invested.

The student also mentions how his university helped him gain the placement. He appreciates the university’s personality development, great campus interviews and best education to build thier confidence and groom them.

By concluding, he suggests every student to work hard and achieve their dreams and passion.

Show more
0
3
https://avalanches.com/in/janjgir_satyamahir6726506_29_09_2023

Satyam.ahir

I want to be an photographer

Hobby.is playing game and photographer

My stylish pic

0
3
https://avalanches.com/in/janjgir_satyamahir6726505_29_09_2023

Satyam.ahir

I want to be an photographer

Hobby.is playing game and photographer

My stylish pic

0
2
https://avalanches.com/in/janjgir_satyamahir6726504_29_09_2023

Satyam.ahir

I want to be an student

Hobby.is playing game and photographer

My stylish pic

0
2
https://avalanches.com/in/janjgir_satyamahir6726503_29_09_2023

Satyam.ahir

I want to be an photographer

Hobby.is playing game and photographer

My stylish pic

0
5

Anhydrous Lanolin Market Growth Scenario 2030


According to the Regional Research Reports, the global anhydrous lanolin market size is projected to be a million USD in 2022 to multi-million USD in 2033, exhibiting a CAGR of 7.9% from 2023 to 2033.


Request Sample Copy of this Report: https://www.regionalresearchreports.com/request-sample/anhydrous-lanolin-market/CM-1775


Show more
0
4